ಅಂಕಣಪ್ರಮುಖ ಸುದ್ದಿ

ಕುರುಕ್ಷೇತ್ರ : ಕರ್ಣ-ದುರ್ಯೋಧನ ಪೋಸ್ಟರ್ , ಅದ್ಧೂರಿ ಸಂದೇಶ!

ಬೆಂಗಳೂರು : ಬಹು ನಿರೀಕ್ಷಿತ , ಬಹು ತಾರಾಗಣದ ‘ಕುರುಕ್ಷೇತ್ರ’ ಸಿನಿಮಾ  ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಅದ್ಧೂರಿ ಮೇಕಿಂಗ್ ಸಿನೆಮಾದಲ್ಲಿ ಖ್ಯಾತ ನಟರು ನಟಿಸಿರುವ ಕುರುಕ್ಷೇತ್ರ ಸಿನಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ರಿಲೀಸ್​ಗೆ ದಿನಗಣನೆ ಇರುವಂತೆ ದುರ್ಯೋಧನ ಮತ್ತು ಕರ್ಣ ಪಾತ್ರಧಾರಿ ದರ್ಶನ್ ಮತ್ತು ಅರ್ಜುನ್ ಸರ್ಜಾ ಇರುವ ಮತ್ತೊಂದು ಪೋಸ್ಟರ್​ ಬಿಡುಗಡೆಗೊಳಿಸಿದೆ.

ಸಿಂಹಾಸನದಲ್ಲಿ ರಾಜ ವೈಭೋಗದಿಂದ ಮೆರೆಯುತ್ತಿರುವ ಚಿತ್ರ ಸಿನೆಮಾದ ಅದ್ಧೂರಿ ಮೇಕಿಂಗ್ ಗೆ ಸಾಕ್ಷಿಯಾಗಿದೆ. ಇಬ್ಬರು ಒಟ್ಟಾಗಿ ಕುಳಿತಿರುವ ಕಲರ್ ಫುಲ್ ಪೋಸ್ಟರ್​​ ಕಂಡು ಸಿನಿ ಅಭಿಮಾನಿಗಳು ಖುಷಿ ಆಗಿದ್ದಾರೆ.  ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕುರುಕ್ಷೇತ್ರ ಆಗಸ್ಟ್​ 2 ರಂದು ತೆರೆಮೇಲೆ ಬರಲಿದೆ.

Related Articles

Leave a Reply

Your email address will not be published. Required fields are marked *

Back to top button