KMF ಅಧ್ಯಕ್ಷ ಗಾದಿಗೇರಲು ರೇವಣ್ಣ ಆಪರೇಷನ್
ರೇವಣ್ಣ ಅವರಿಂದ KMF ನಾಲ್ವರು ಕಾಂಗ್ರೆಸ್ ಸದಸ್ಯರ ಹೈಜಾಕ್
KMF ಕಾಂಗ್ರೆಸ್ ನಿರ್ದೇಶಕರನ್ನು ರೆಸಾರ್ಟ್ ಗೆ ಕರೆದೊಯ್ದ ರೇವಣ್ಣ
ವಿನಯವಾಣಿ ಡೆಸ್ಕ್ಃ ಕೆಎಂಎಫ್ ಅಧ್ಯಕ್ಷ ಸ್ಥಾನ ಪಡೆಯಲೇ ಬೇಕೆಂಬ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ಪಕ್ಷದ ಒಟ್ನು 9 ಜನ ನಿರ್ದೇಶಕರಲ್ಲಿ ನಾಲ್ವರನ್ನು ರೇವಣ್ಣನವರು ರೆಸಾರ್ಟ್ ಗೆ ಕರೆದೊಯ್ಯುವ ಮೂಲಕ ದೋಸ್ತಿಗಳಲ್ಲಿಯೇ ಆಪರೇಷನ್ ಮಾಡಿ ಶಾಕ್ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಾದ ಸಿದ್ರಾಮಯ್ಯ ಮತ್ತು ಡಿಕೆಶಿ ತಮ್ಮ ಪಕ್ಷದ ಶಾಸಕ ಭೀಮಾನಾಯಕ ಅವರಿಗೆ ಕೆಎಂಎಫ್ ಅಧ್ಯಕ್ಷ ಗಾದಿಗೇರಿಸಲು ನಿರ್ಧರಿಸಿ, ರೇವಣ್ಣನವರಿಗೂ ಸಹ ಹೇಳಿದ್ದರಂತೆ.
ಆದರೆ ರೇವಣ್ಣನವರು ಕೆಎಂಎಫ್ ಅಧ್ಯಕ್ಷ ಸ್ಥಾನ ಪಡೆಯಲೇ ಬೇಕೆಂದು ಕಾಂಗ್ರೆಸ್ ನ ನಾಲ್ವರು ನಿರ್ದೇಶಕರನ್ನು ಕರೆದೊಯ್ದು ಹೈದ್ರಾಬಾದ್ ರೆಸಾರ್ಟ್ ವೊಂದರಲಿ ಇರಿಸಿದ್ದಾರೆ.
ಈ ಘಟನೆ ರಾಜ್ಯದಲ್ಲಿ ದೋಸ್ತಿಗಳ ಮಧ್ಯೆ ತಲ್ಲಣ ಮೂಡಿಸಿದೆ ಎಂದು ಹೇಳಲಾಗುತ್ತಿದೆ. ದೋಸ್ತಿ ಸರ್ಕಾರವಿದ್ದಾಗ ಬಿಜೆಪಿ ಆಪರೇಷನ್ ಕಮಲ ಮಾಡಿದೆ.
ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಹೇಳಿಕೆ ನೀಡುತ್ತಿದ್ದ ಇದೇ ರೇವಣ್ಣ ಕೆಎಂಎಫ್ ಗಾದಿಗಾಗಿ ದೋಸ್ತಿಗಳ ನಿರ್ದೇಶಕರನ್ನು ಆಪರೇಷನ್ ಮಾಡಿರುವದು ಬಿಜೆಪಿ ಬಾಯಿಗೆ ಉತ್ತಮ ಆಹಾರವನ್ನೆ ರೇವಣ್ಣ ನೀಡಿದ್ದಾರೆ ಎನ್ನಬಹುದು.