ಪ್ರಮುಖ ಸುದ್ದಿ
ವೈಟ್ ಕಾಲರ್ ಕ್ರೈಂಗೆ ಬ್ರೇಕ್ – ನೂತನ ಪೊಲೀಸ್ ಆಯುಕ್ತ ಬಾಸ್ಕರ್ ರಾವ್!
ಬೆಂಗಳೂರು : ವೈಟ್ ಕಾಲರ್ ಕ್ರೈಂಗೆ ಮೊದಲು ಬ್ರೇಕ್ ಹಾಕಬೇಕಾದ ಸವಾಲು ನಮ್ಮ ಮುಂದಿದೆ. ಡ್ರಗ್ಸ್ ಮಾಫಿಯಾ, ಹಫ್ತಾ ವಸೂಲಿ ದಂಧೆ, ಗೂಂಡಾಗಳಿಗೆ ಬ್ರೇಕ್ ಹಾಕುವ ಮೂಲಕ ಅಪರಾಧಗಳು ಹೆಚ್ಚದಂತೆ ಕ್ರಮ ಕೈಗೊಳ್ಳಬೇಕಿದೆ. ಬೆಂಗಳೂರು ನಗರವನ್ನು ಸುರಕ್ಷಿತ ನಗರವನ್ನಾಗಿಸುವಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳ ಸಹಕಾರ ಕೋರುತ್ತೇನೆ ಎಂದು ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್ ಹೇಳಿದ್ದಾರೆ.
ಅಧಿಕಾರಿ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ನಗರದ ಸುಮಾರು 1.30ಕೋಟಿ ಜನರ ಸುರಕ್ಷತೆಯ ಜವಬ್ದಾರಿ ನಮ್ಮ ಮೇಲಿದೆ. ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ನೇಮಿಸಿದ್ದಕ್ಕೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.