ಪ್ರಮುಖ ಸುದ್ದಿ
ಚಿತ್ರದುರ್ಗದಲ್ಲೊಂದು ದಾರುಣ ಘಟನೆ: ಅಪ್ಪ, ಮಗಳು ಸಾವು!
ಚಿತ್ರದುರ್ಗ : ಕೌಟುಂಬಿಕ ಕಲಹದಿಂದ ಬೇಸತ್ತು ಖಜಾನೆ ಇಲಾಖೆಯಲ್ಲಿ ಮುಖ್ಯ ಲೆಕ್ಕಿಗನಾಗಿದ್ದ ನಾರಾಯಣಪ್ಪ(35) ಬೆಳಗ್ಗೆ 8ಗಂಟೆ ಸುಮಾರಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಪತಿ ಮೃತಪಟ್ಟ ಅರ್ಧಗಂಟೆಯೊಳಗೆ ಪತ್ನಿ ಮತ್ತು ಮೂರು ವರ್ಷದ ಹೆಣ್ಣು ಮಗು ಅಪಘಾತಕ್ಕೀಡಾಗಿದ್ದು ಮಗು ಆದ್ಯ ಸ್ಥಳದಲ್ಲೇ ಮೃತಪಟ್ಟರೆ ಪತ್ನಿ ರಮ್ಯಾ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಬಡಾವಣೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಆತಂಕಗೊಂಡ ಪತ್ನಿ ರಮ್ಯ ಆತ್ಮಹತ್ಯಗೆ ಶರಣಾಗಲು ಮಗುವಿನೊಂದಿಗೆ ಹೆದ್ದಾರಿಗೆ ತೆರಳಿ ಅಪಘಾತಕ್ಕೀಡಾದರೋ ಅಥವಾ ಅಪಘಾತವೇ ನಡೆದಿದೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.