ಅಂಕಣ
ಮೂರು ಮೆಟ್ರೋ ರೈಲುಗಳ ಮೇಲೆ ಕಲ್ಲೆಸೆತ!
ಬೆಂಗಳೂರು : ಮೂರು ಮೆಟ್ರೋ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಜಖಂಗೊಳಿಸಿದ ಘಟನೆ ಶ್ರೀರಾಂಪುರ ನಿಲ್ದಾಣ ಹಾಗೂ ಮಂತ್ರಿ ಸ್ಕ್ವೈರ್ ಸಮೀಪ ನಡೆದಿದೆ. ಇನ್ನು ಕಳೆದ ಮೂರು ದಿನಗಳಿಂದ ಮೆಟ್ರೊ ರೈಲು ಮಾರ್ಗದ ನಡುವೆ ಕಸದ ಬ್ಯಾಗ್ ಎಸೆದು ಅಡಚಣೆ ಉಂಟುಮಾಡಲಾಗುತ್ತಿದ್ದು ಅಧಿಕಾರಿಗಳು ರೈಲು ನಿಲ್ಲಿಸಿ ಬ್ಯಾಗ್ ಗಳನ್ನು ತೆರವುಗೊಳಿಸುವ ಸ್ಥಿತಿ ನಿರ್ಮಾಣ ಆಗಿದೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.