ಪ್ರಮುಖ ಸುದ್ದಿ
ಪ್ರವಾಹ : 12ಸಾವಿರ ಜನ ಸ್ಥಳಾಂತರ, 12 ಜನ ಬಲಿ!
ಬೆಂಗಳೂರು : ಮಹಾರಾಷ್ಟ್ರದಲ್ಲಿ ಮಹಾಮಳೆ ಪರಿಣಾಮ ಕೊಯ್ನಾ ಡ್ಯಾಮ್ ಮೂಲಕ ರಾಜ್ಯದ ನದಿಗಳಿಗೆ ನೀರು ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಉತ್ತರ ಕರ್ನಾಟಕ ಹಾಗೂ ಮಲೆನಾಡಿನಲ್ಲೂ ಮಳೆ ಆರ್ಭಟಿಸುತ್ತಿದೆ. ಪರಿಣಾಮ ಕೃಷ್ಣಾ, ಭೀಮಾ, ಘಟಪ್ರಭಾ, ವೇದಗಂಗಾ, ಅಘನಾಶಿನಿ, ಶರವಾತಿ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು ರಾಜ್ಯದ 50ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿವೆ. ನದಿಪಾತ್ರದಲ್ಲಿ ಪ್ರವಾಹ ಸೃಷ್ಠ ಆಗಿದ್ದು ವಿವಿಧ ಗ್ರಾಮಗಳಿಂದ ಸುಮಾರು 12ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಭೀಕರ ಪ್ರವಾಹಕ್ಕೆ ಈವರೆಗೆ 12ಜನ ಮೃತಪಟ್ಟಿರುವುದು ವರದಿ ಆಗಿದೆ.
ಭೀಕರ ಬರದಿಂದ ತತ್ತರಿಸಿದ್ದ ರಾಜ್ಯದ ಜನ ವಿಶೇಷ ಆಚರಣೆಗಳು, ಪೂಜೆ ಪ್ರಾರ್ಥನೆಗಳ ಮೂಲಕ ವರುಣದೇವನ ಕೃಪೆಗಾಗಿ ಮೊರೆಯಿಟ್ಟಿದ್ದರು. ಆದರೆ, ಈ ರಾಜ್ಯದ ಕೆಲ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಶಾಂತನಾಗು ಮಳೆರಾಯ ಎಂದು ಜನ ಪ್ರಾರ್ಥಿಸುವ ಸ್ಥಿತಿ ನಿರ್ಮಾಣ ಆಗಿದೆ. ಇನ್ನುಳಿದ ಕೆಲ ಭಾಗದಲ್ಲಿ ಬರ ಪರಸ್ಥಿತಿ ಮುಂದುವರೆದಿದೆ.