ಪ್ರಮುಖ ಸುದ್ದಿ
ನಾಪತ್ತೆ ಪ್ರಕರಣ: ಸಹೋದರನ ಸಂಪರ್ಕಕ್ಕೆ ಸಿಕ್ಕ ಡಿವೈಎಸ್ಪಿ ಶಂಕರ್ ಮಾರಿಯಾಳ್
ಕಾರವಾರ : ಕೈಗಾ ಸಮೀಪದ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಡಿವೈಎಸ್ಪಿ ಶಂಕರ್ ಮಾರಿಯಾಳ್ ಅವರು ಫೋನ್ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಸಹೋದರ ಅಪ್ಪಯ್ಯ ಮಾರಿಯಾಳ್ ಅವರಿಗೆ ಫೋನ್ ಸಂಪರ್ಕಕ್ಕಿ ಸಿಕ್ಕಿದ್ದು ಸುರಕ್ಷಿತವಾಗಿದ್ದೇವೆ. ದಾರಿ ತಪ್ಪಿರುವ ಕಾರಣ ಬೇರೊಂದು ಗ್ರಾಮದತ್ತ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಅಪ್ಪಯ್ಯ ಮಾರಿಯಾಳ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣವೊಂದರ ವಿಚಾರಣೆಗಾಗಿ ಯಲ್ಲಾಪುರ ತಾಲೂಕಿನ ಲಕ್ಕಿಮನೆ ಗ್ರಾಮಕ್ಕೆ ತೆರಳಿ ಹಿಂದಿರುಗುವ ಸಂದರ್ಭದಲ್ಲಿ ಅರಣ್ಯದಲ್ಲಿ ಡಿವೈಎಸ್ಪಿ ಶಂಕರ್ ಮಾರಿಯಾಳ್, ಇನ್ಸ್ ಪೆಕ್ಟರ್ ರವಿಕುಮಾರ್ ನಾಪತ್ತೆ ಆಗಿದ್ದರು. ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿರುವ ಅಧಿಕಾರಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ನಾಪತ್ತೆಯಾದ ಪೊಲೀಸ್ ಅಧಿಕಾರಿಗಳ ಕುಟುಂಬದಲ್ಲಿ ಆತಂಕ ಮೂಡಿಸಿತ್ತು. ಸದ್ಯ ನಾಪತ್ತೆಯಾದ ಡಿವೈಎಸ್ಪಿ ಶಂಕರ್ ಫೋನ್ ಸಂಪರ್ಕಕ್ಕೆ ಸಿಕ್ಕಿದ್ದು ಆತಂಕ ದೂರಾಗಿಸಿದೆ.