ದರ್ಪಣ ತೀರ್ಥ ನದಿ ಪ್ರವಾಹ- ಸುಬ್ರಹ್ಮಣ್ಯ ದೇಗುಲಕ್ಕೆ ನುಗ್ಗಿದ ನೀರು
ದರ್ಪಣ ತೀರ್ಥ ನದಿ ಪ್ರವಾಹ- ಸುಬ್ರಹ್ಮಣ್ಯ ದೇಗುಲ ಹೊರಾಂಗಣಕ್ಕೆ ನುಗ್ಗಿದ ನೀರು
ಮಂಗಳೂರುಃ ತಾಲೂಕಿನ ಕುಕ್ಕೆ ಸುಬ್ರಮಣ್ಯ ಪರಿಸರ ವ್ಯಾಪ್ತಿ ಸೋಮವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದ ಪರಿಣಾಮ ದರ್ಪಣ ತೀರ್ಥ ನದಿ ಪ್ರವಾಹ ಉಂಟಾಗಿದೆ. ಹ
ಪರಿಣಾಮ ಇಲ್ಲಿನ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣಕ್ಕೆ ನೀರು ನುಗ್ಗಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಗೋಪುರವು ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿತ್ತು.
ಅಲ್ಲದೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಿಂದ ಆದಿ ಸುಬ್ರಹ್ಮಣ್ಯ ದೇಗುಲ ತಲುಪುವ ಸಂಪರ್ಕ ಸೆತುವೆಯು ಮುಳಗಡೆಯಾಗಿತ್ತು.
ಮತ್ತು ದರ್ಪಣ ತೀರ್ಥ ನದಿ ನೀರು ಆದಿ ಸುಬ್ರಹ್ಮಣ್ಯ ಉದ್ಯಾನವನಕ್ಕೆ ನುಗ್ಗಿತ್ತು.
ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಕೆಲ ಕಾಲ ಪ್ರವಾಹ ಉಂಟಾಗಿ ಆತಂಕ ಸೃಷ್ಟಿಸಿತ್ತು. ಮಳೆ ನಿಂತ ಮೇಲೇ ಕ್ರಮೇಣ ಪ್ರವಾಹ ಕಡಿಮೆಯಾಗಿದೆ.
ದರ್ಪಣ ತೀರ್ಥದ ಪ್ರವಾಹದಿಂದಾಗಿ ವಸತಿಗೃಹಗಳು, ಮನೆ, ತೋಟ, ಗದ್ದೆಗಳು ಸೇರಿದಂತೆ ಅಂಗಡಿ, ಹೊಟೇಲ್ ಗಳಿಗೆ ನೀರು ನುಗ್ಗಿ ಕೆಲಕಾಲ ಜನ ಜೀವನ ಅಸ್ತವ್ಯಸ್ತತೆ ಗೆ ಆತಂಕವಾಗಿತ್ತು ಎನ್ನಲಾಗಿದೆ.