ಪ್ರಮುಖ ಸುದ್ದಿ

ಸಿದ್ದು ಸಿಎಂ ಆಗಲು ಬಟ್ಟೆ ಸಿದ್ಧ – ಕಟೀಲು ಟೀಕೆ

ಬೆಂಗಳೂರಃ ಹಿಂದೆ ಸಿದ್ರಾಮಯ್ಯನವರ ಸರ್ಕಾರ ಕೊಲೆಗಡುಕ ಸರ್ಕಾರವಾಗಿತ್ತು. ಶರತ್ ಮಡಿವಾಳ ಮೃತದೇಹವನ್ನು ಸಿದ್ರಾಮಯ್ಯ ಮಂಗಳೂರಿಗೆ ಬರುತ್ತಿದ್ದಾರೆ ಎನ್ನುವ ಕಾರಣ ಮುಚ್ಚಿಡಲಾಗಿತ್ತು ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲು ಸಿದ್ದು ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಸಿದ್ರಾಮಯ್ಯ ಸರ್ಕಾರ ನಡೆಸುವಾಗ ಸಾಕಷ್ಟು ಕೊಲೆಗಳು ನಡೆದವು. ನೆರೆ ಹಾವಳಿ ಸಂಬಂಧಿಸಿದಂತೆ ಸಿದ್ದು ತನ್ನ ಕ್ಷೇತ್ರ ಬಿಟ್ಟು ಬೇರಾವ ಹಳ್ಳಿಗೆ ತೆರಳಿ ಜನರ ಸ್ಥಿತಿಗತಿ ಅರಿಯಲಿಲ್ಲ. ಇದೀಗ ಮತ್ತೆ ಸಿಎಂ ಆಗುತ್ತೇನೆ ಎಂದು ಹೊಸ ಬಟ್ಟೆ ಸಿದ್ಧ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಸಿದ್ರಾಮಯ್ಯನವರಿಗಿಂತ ಕುಮಾರಸ್ವಾಮಿ ಎಷ್ಟೋ ವಾಸಿ. ಹತ್ತಾರು ಹಳ್ಳಿಗಳಿಗಾದರೂ ಭೇಟಿ ನೀಡಿದ್ದರು ಎಂದ ಅವರು, ಕುಮಾರಸ್ವಾಮಿ ಅವರ ಮೇಲೆ ಇದೇ ಮೊದಲ ಬಾರಿಗೆ ಸಾಫ್ಟ್ ಆಗಿ ಮಾತನಾಡಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button