ಪ್ರಮುಖ ಸುದ್ದಿ
ಟಿಪ್ಪು ವಿಚಾರಃ ಭಾವನೆ ಜೊತೆ ಬಿಜೆಪಿ ಚಲ್ಲಾಟ ಖಂಡ್ರೆ ಆರೋಪ
ಟಿಪ್ಪು ಅಧ್ಯಾಯಃ ಭಾವನೆಗಳ ಜೊತೆ ಬಿಜೆಪಿ ಚಲ್ಲಾಟ ಖಂಡ್ರೆ ಆರೋಪ
ಬೆಂಗಳೂರುಃ ಪಠ್ಯಪುಸ್ತಕ ದಿಂದ ಟಿಪ್ಪು ಅಧ್ಯಾಯ ತೆಗೆದು ಹಾಕಲು ಮುಂದಾದ ಬಿಜೆಪಿ ಜನರ ಭಾವನೆಗಳ ಜೊತೆ ಚಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷ, ಮುಖಂಡ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಬಿಜೆಪಿ ಸುಳ್ಳನ್ನೆ ಸತ್ಯ ಮಾಡಲು ಹೊರಟಿದೆ. ಯುವಕರಲ್ಲಿ ಭಾವನಾತ್ಮಕ ವಿಷಯ ಕೆದಕಿ ಕೋಮುವಾದಕ್ಕೆ ಪುಷ್ಠಿ ನೀಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.