ರೈತರ ಸಮೃದ್ಧಿಗಾಗಿ ನಾವೆಲ್ಲರೂ ಸಹಕರಿಸಬೇಕಿದೆ- ಸಿದ್ಧೇಶ್ವರ ಶ್ರೀ
ಶಹಾಪುರದಲ್ಲಿ ವಿಶ್ವ ರೈತ ದಿನಾಚರಣೆ
ಶಹಾಪುರಃ ರೈತರು ದೇಶದ ಬೆನ್ನೆಲೆಬು ಎಂದು ಬರಿ ಬಾಯಿ ಮಾತಿನಿಂದ ಹೇಳಿದರೆ ಸಾಲದು. ಅವರ ಸಂಕಷ್ಟ ಅರಿತು ಅವರಿಗೆ ಸಹಕಾರಿಯಾಗಿ ಕೆಲಸ ಮಾಡಿದಲ್ಲಿ ಮಾತ್ರ ಆ ಮಾತಿಗೊಂದು ಅರ್ಥ ಬರಲಿದೆ ಎಂದು ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು ತಿಳಿಸಿದರು.
ತಾಲೂಕಿನ ಭೀಮರಾಯನ ಗುಡಿಯ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವಿಶ್ವ ರೈತ ದಿನಚಾರಣೆ ಅಂಗವಾಗಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ರೈತಾಪಿ ಜನರ ಕಷ್ಟ ಖುಷಿಯಲ್ಲಿ ಎಲ್ಲರೂ ಭಾಗವಹಿಸಬೇಕು. ವರ್ಷದ ಮೂರುಕಾಲಗಳಲ್ಲಿಯೂ ರೈತರು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬೇಸಿಗೆ ಇದೆ ಎಂದು ಸುಮ್ಮನೆ ಕೂಡವ ಹಾಗಿಲ್ಲ. ನೀರಾವರಿ, ಅಥವಾ ಕೊಳವೆ ಬಾವಿ ಮತ್ತು ಇತರೆ ನೀರಿನ ಮೂಲಗಳಿಂದ ನಿರಂತರ ಕೃಷಿಕಾಯಕದಲ್ಲಿ ತೊಡಗಿಸಿಕೊಂಡು zಇಡಿ ದೇಶಕ್ಕೆ ಸಾಕಾಗುವಷ್ಟ ಅನ್ನವನ್ನು ಅವರು ದಡಿದು ಕೊಡುತ್ತಾರೆ ಎಂಬದು ಯಾರೊಬ್ಬರು ಮರೆಯುವಂತಿಲ್ಲ.
ಕಳೆದ ನಾಲ್ಕು ವರ್ಷದಿಂದ ರೈತರು ನಿರಂತರ ನಷ್ಟ ಅನುಭವಿಸುತ್ತಿದ್ದಾರೆ. ಅವರ ಸಹಾಯಕ್ಕೆ ಸಹಕಾರಕ್ಕೆ ಯಾರೊಬ್ಬರು ಜನಪ್ರತಿನಿಧಿ ತಲೆ ಕೆಡಿಸಿಕೊಳ್ಳಲಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಅಥವಾ ಬರಗಾಲ ಮಳೆಯ ಅಭಾವ ಒಂದಿಲ್ಲೊಂದು ಸಮಸ್ಯೆ ನಡುವೆ ರೈತರು ಬದುಕು ಸ್ಥಿತಿ ಬಂದಿದೆ.
ಎಲ್ಲರಿಗೂ ಇದ್ದಂತೆ ಅವರಿಗೂ ಮಕ್ಕಳು ಮರಿಗಳು ಇರುತ್ತವೆ. ಮದುವೆ ಮುಂಜಿಯಂತಹ ಕಾರ್ಯಕ್ರಮಗಳು ಇರುತ್ತವೆ. ಎಲ್ಲವನ್ನು ನಿಭಾಯಿಸುವದು ಕಷ್ಟ ಕೆಲಸ. ಇದನ್ನು ಅರಿತು ಸಂಘಟನೆಗಳು ರೈತರ ಧ್ವನಿಯಾಗಬೇಕು. ಬರಿ ಇಂತಹ ಕಾರ್ಯಕ್ರಮದಲ್ಲಿ ಪ್ರಗತಿ ರೈತರಿಗೆ ಸನ್ಮಾನಿಸಿ ಕೈತೊಳೆದುಕೊಂಡರೆ ಸಾಲದು. ಅವರ ನಷ್ಟ ಕಷ್ಟಗಳಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಕುಂಬಾರಗೇರಿ ಮಠ ಸುಗೂರೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಪ್ರಗತಿಪರ ರೈತರು ಹಾಗೂ ಕನ್ನಡ ಪರ ಹೋರಾಟಗಾರರಿಗೆ ರೈತ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಧ್ಯಕ್ಷ ಶಾಂತಗೌಡ ಚನ್ನಪಟ್ಟಣವಹಿಸಿದ್ದರು. ಸಂಘದ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಉಮ್ಮರಗಿ, ಜೆಡಿಎಸ್ ಮುಖಂಡ ಅಮೀನರಡ್ಡಿ ಪಾಟೀಲ್, ರಾಯಪ್ಪಗೌಡ ದರ್ಶನಾಪುರ, ತಹಶೀಲ್ದಾರ ಜಗನ್ನಾಥರಡ್ಡಿ, ಕಾಡಾ ಆಡಳಿತಾಧಿಕಾರಿ ವಿ.ಕೆ.ಪೋತದಾರ, ದಯಾನಂದ ಪಾಟೀಲ್, ಶ್ರೀಕಾಂತ ಪಾಟೀಲ್, ಮಹೇಶಗೌಡ ಸುಬೇದಾರ ಇತರರು ಉಪಸ್ಥಿತರಿದ್ದರು.