“ಮೌನ ಕೋಮು ಯುದ್ಧ” ಮರತೂರ ಬರೆದ ಭಾವಕಾವ್ಯ
ಮೌನ ಕೋಮು ಯುದ್ಧ..
ಕಣ್ಣುಗಳು ನೀರ ಮೂಲಕ ಯುದ್ಧ ಸಾರಿವೆ.
ಹೃದಯ ರಕ್ತ ಚೆಲ್ಲುವ ಮೂಲಕ ಮೌನವಹಿಸಿದೆ.
ಅವರೆಲ್ಲರೂ ಕಲ್ಲೆದೆಯ ಮಾಡಿಕೊಂಡು ಕೈಯಲ್ಲಿ ಕೋಮುವಾದದ ಕೋಲು ಹಿಡಿದಿದ್ದು ಕಾಣಲೇಯಿಲ್ಲ.
ಭಾರತ ಮಾತೆ ಕಗ್ಗತ್ತಲಲ್ಲಿ ಮಲಗಿರುವಾಗ.
ಕೋವಿಯ ಸದ್ಧು ಮಾಡದೇ ಮೌನ ಕೋಮುಯುದ್ಧ ಸಾರಿದ್ದಾರೆ.
ಮಾನವೀಯತೆಯ ಮರ ಮುರಿದು ಕೋಮುವಾದದ ಕೋಲು ಹಿಡಿದು ಈ ದೇಶ ಆಳುತ್ತಿದ್ದಾರೆ.
ತುಟಿಗಳಲ್ಲಿ ಮಗಳ ಉಳಿಸುತ್ತಾರೆ.
ಮನದೊಳಗಣ ಕೋಮಿನ ದಳ್ಳುರಿ ಉರಿಯಾಗಿ ಹೊರಹೊಮ್ಮಿದೆ.
ಭಾರತೀಯ ಮಗಳ ಹೃದಯ ರಕ್ತ ಬುಗ್ಗೆಯಾದಾಗ
ಧರ್ಮವೆಂಬ ಬಣ್ಣ ಹಚ್ಚಿ ಕೋಮಿನ ಯುದ್ಧ ಪ್ರಾರಂಭ ಮಾಡಿದ್ದಾರೆ.
ಕೊರಳಲ್ಲಿರುವ ಮಾನವೀಯತೆ ಪ್ರೀತಿ
ಕರುಳಿನೊಳಗಿಲ್ಲದೇ ಕೋಮುಯುದ್ಧ ಮಾಡುತ್ತಿದ್ದಾರೆ.
ಹೊಳೆವ ಚಿನ್ನದ ಪಾತ್ರೆಯೊಳಗೆ ವಿಷದ ಅನ್ನವಿಕ್ಕಿದ್ದಾರೆ.
ಬಡವರ ಹಸಿವು ಕಸಿದು ಸಿರಿವಂತರ ಹೊಟ್ಟೆ ತುಂಬಿಸುತ್ತಿದ್ದಾರೆ.
ಬಣ್ಣಗಳ ಮೂಲಕ ಬಣವಾಗಿಸಿಕೊಂಡು ಬಡವರೆದೆಯ ಬಗೆಯುತ್ತ ಬಂಡಾಯಕ್ಕೆ ಬೆಂಕಿಯಿಡುಯ್ತಾ ಕೋಮುಯುದ್ಧ ಸಾರಿದ್ದಾರೆ.
ಹಸಿದ ಹೊಟ್ಟೆಗೆ ಹಿಟ್ಟು ಕೊಡುವ ಬದಲು ಕೋಮುವಾದದ ಏಟು ಕೊಡುತ್ತಿದ್ದಾರೆ.
ಧರ್ಮಗಳ ಮೂಲಕ ಕೋಮುಯುದ್ಧ ಪ್ರಾರಂಭ ಮಾಡಿದ್ದಾರೆ.
ಜ್ಞಾನವೆಂಬ ಮಾನವೀಯತೆಯ ಗುಡಿಯ ಉರುಳಿಸಿ
ಮೌಢ್ಯತೆಯ ಬಾಗಿಲು ತೆಗೆಯುತ್ತಿದ್ದಾರೆ.
ಜಾತಿ ಧರ್ಮದ ಸಂಕೋಲೆಯಲ್ಲಿ ನಾಗರಿಕತೆಯ ಹೂತು ಹಾಕುತ್ತಿದ್ದಾರೆ.
ಬೀಳುತ್ತಿರುವ ಭಾರತ ತೋರಿಸಿ, ಹೊಳೆವ ಚಂದ್ರನಷ್ಟೆ ಅನುಭವ ಕೊಡುತ್ತಿದ್ದಾರೆ.
ಬಾಯಿಗೆ ಸಿಹಿ ಬೆಲ್ಲ ಹಾಕುತ್ತಾ ಬೆನ್ನಿಗೆ ಕಹಿ ಚೂರಿ ಇರಿಯುತ್ತಾ.
ಮೌಢ್ಯವೆಂಬ ಮಾಹಾಮನೆಯೊಳಗೆ
ಮೌನ ಕೋಮುಯುದ್ಧ ಪ್ರಾರಂಭ ಮಾಡಿದ್ದಾರೆ.
@ ಕೆ.ಎಂ.ವಿಶ್ವನಾಥ ಮರತೂರ.
9686714046