ಪ್ರಮುಖ ಸುದ್ದಿ
ಸಾಮಾಜಿಕ ಕಾರ್ಯಕರ್ತ ಹಿರೇಮಠ ಮೇಲೆ ಹಲ್ಲೆ
ಸಾಮಾಜಿಕ ಕಾರ್ಯಕರ್ತ ಹಿರೇಮಠ ಮೇಲೆ ಹಲ್ಲೆ
ಬೆಂಗಳೂರಃ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಹಾಗೂ ಅವರ ಸಂಘಟನೆಯ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಜರುಗಿದೆ.
ರಾಮನಗರದ ಕೇತಗನಹಳ್ಳಿಯಲ್ಲಿ ತನ್ನ ಮತ್ತು ಕೆಲವು ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ ಅವರು ಸಮೀಪದ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಭುಕಬಳಿಕೆ ಆರೋಪ ಮಾಡಿದ್ದ ಅವರು,ಅದಕ್ಕೆ ಸಂಬಂಧಿಸಿದಂತೆ ದಾಖಲೆ ಸಂಗ್ರಹಿಸಲು ಹಿರೇಮಠ ಮತ್ತು ರಾಮಕೃಷ್ಣ ರಡ್ಡಿ ಎಂಬುವರು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಹಿರೇಮಠ ಅವರು ಹಲವಾರು ಹಗರಣಗಳನ್ನು ಬಯಲಿಗೆಳೆದಿದ್ದರೆ. ಇಲ್ಲಿನ ಭುಕಬಳಿಕೆಯಲ್ಲಿ ಎಚ್ಡಿಕೆ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.