ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಸೌಲಭ್ಯ ಕಲ್ಪಿಸಿ- ಶೀಲಾ ಪತ್ತಾರ
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೂ ಮೂಲ ಸೌಲಭ್ಯಗಳು ದೊರೆಯಲಿ
ಶಹಾಪುರ : ವಿಶ್ವದ ವೈರಿಯಾಗಿರುವ ಮಾನವ ಜೀವನ ಸಂಕುಲಕ್ಕೆ ಅಪಾರ ನಷ್ಟವನ್ನುಂಟು ಮಾಡಿದ ಈ ಮಹಾಮಾರಿ ಕಿಲ್ಲರ್ ಕರೋನಾ ವೈರಸ್ ನಿಂದ ಭಾರತ ಲಾಕಡೌನ್ ಇದ್ದರೂ ಕೂಡ ಸೇವಾ ನಿರತ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಸರ್ ಮುಂತಾದ ಸೌಲಭ್ಯಗಳು ಸರ್ಕಾರ ಒದಗಿಸುತ್ತದೆ.
ಆದರೆ ಬಹುತೇಕವಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೂ ಇಂತಹ ಸೌಲಭ್ಯ ಸಿಗದೆ ಇರುವುದು ತುಂಬಾ ಬೇಸರದ ಸಂಗತಿಯಾಗಿದೆ.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಕೂಡ ನಮ್ಮ ರಕ್ಷಣೆಗಾಗಿ ಮನೆ, ಗಂಡ, ಮಕ್ಕಳೆಲ್ಲಾ ಮರೆತು ನಮಗಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಕರೋನಾ ವಾರಿಯರ್ಸ್ ಅಲ್ವಾ ?.
ಅವರು ಕೂಡ ಪ್ರತಿ ದಿನ ಮನೆ ಮನೆಗೆ ಹೋಗಿ ಸರ್ವೆ ಮಾಡಿ ಹಾದಿ ಬೀದಿಗಳಲ್ಲಿ ಕರೋನದ ಕುರಿತು ಮುಂಜಾಗ್ರತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ .
ಮಹಾಮಾರಿ ಕರೋನ ವಿರುದ್ಧ ಹೋರಾಡುವ ಸೈನಿಕರಂತೆ ಹಳ್ಳಿಗಳಲ್ಲಿ ಪ್ರತಿನಿತ್ಯ ಕರೋನಾ ವೈರಸ್ ತಡೆಗಟ್ಟಲು ಮುಂಜಾನೆಯಿಂದ ಸಂಜೆಯವರೆಗೂ ಮನೆ ಕೆಲಸ ಬಿಟ್ಟು ಜಾಗೃತಿ ಮೂಡಿಸಲು ಮುಂದಾಗಿರುವ ಮಹಿಳಾ ಸೈನಿಕರಿಗೆ ಇಂತಹ ಸಂದರ್ಭದಲ್ಲಿ ಅವರ ಸುರಕ್ಷತೆಗಾಗಿ ಸರ್ಕಾರ ಒಂದಿಷ್ಟು ಅವರತ್ತ ಗಮನಹರಿಸಿ ಅವರಿಗೂ ಕೂಡ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಅವರಿಗೂ ಕೂಡ ಕುಟುಂಬ ಇದೆ. ಅವರು ನಮ್ಮಂತೆ ಮನುಷ್ಯರಿದ್ದಾರೆ ಆದ ಕಾರಣ ಕೂಡಲೇ ಅವರಿಗೆ ಮೂಲ ಸೌಲಭ್ಯಗಳು ದೊರೆಯಬೇಕೆಂಬುದು ನನ್ನ ಆಶಯ.
ಈ ಕರೋನಾ ವೈರಸ್ ತಡೆಗಟ್ಟುವ ಕಾರ್ಯದಲ್ಲಿ ತೊಡಗಿರುವ ಅದೆಷ್ಟೋ ಕಾರ್ಯಕರ್ತರು ಬಡತನದ ಕುಟುಂಬದಿಂದ ಬಂದಿದ್ದಾರೆ. ಅಂತಹ ಆಶಾ ಕಾರ್ಯಕರ್ತರಿಗೂ ಒಂದಿಷ್ಟು ವಿಶೇಷವಾದ ಸೌಲಭ್ಯಗಳ ಜೊತೆಗೆ ಟಿಎಡಿಎ ಕೂಡ ಒದಗಿಸಿಕೊಟ್ರೆ ಅವರ ಬದುಕಿಗೂ ಒಂದಿಷ್ಟು ಆಶ್ರಯವಾದೀತು ಎಂಬುದೇ ನನ್ನ ಬರಹದ ಕಳಕಳಿ.
–ಶೀಲಾ. ಎಂ ಪತ್ತಾರ ದೇವಾಪುರ.
ಉಪನ್ಯಾಸಕರು.
9902777109