ಪ್ರಮುಖ ಸುದ್ದಿ

ಪ್ರಪಂಚದಲ್ಲಿಯೇ ಶಕ್ತಿಶಾಲಿ ಪ್ರಧಾನಿ ದೊರೆತಿರುವದು ನಮ್ಮೆಲ್ಲರ ಪುಣ್ಯ-ಉಕ್ಕಿನಾಳ

ಪ್ರಧಾನಿ ಮೋದಿ ನೇತೃತ್ವದ ಸತತ 6 ನೇ ವರ್ಷ ಆಡಳಿತ

ಭ್ರಷ್ಟಾಚಾರ ರಹಿತ ಆಡಳಿತ, ದೇಶದ ಏಳ್ಗೆಗಾಗಿ ಮೋದಿಜೀ ಜೀವ ಮುಡಿಪು

ಶಹಾಪುರಃ ಎಲ್ಲೂ ಕಪ್ಪು ಚುಕ್ಕೆ ಇರದಂತೆ, ದೇಶದ ಅಭಿವೃದ್ಧಿ, ಸದಾ ಜನ ಹಿತ ಬಯಸಿದ ಆಡಳಿತ, ರೈತರ ಕೂಲಿ ಕಾರ್ಮಿಕರ ದುರ್ಬಲರ ಮತ್ತು ಬಡವರ ಹಿತ ಚಿಂತನೆಗಳನ್ನೊತ್ತ ಪ್ರಧಾನಿ ನರೇಂದ್ರ ಮೋದಿಜೀಯವರ ಎರಡನೇ ಬಾರಿ ಸರ್ಕಾರಕ್ಕೆ ಇದೀಗ ಒಂದು ವರ್ಷ ಪೂರೈಸಿ ಉತ್ತಮ ಮಾರ್ಗದ ಸಾಗರೋಪಾದಿ ಅಭೀವೃದ್ಧಿಯತ್ತ ಸಾಗುತ್ತಿರುವದು ನಮ್ಮೆಲ್ಲರಲ್ಲಿ ಹರ್ಷ ತಂದಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ರಾಜೂಗೌಡ ಉಕ್ಕಿನಾಳ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಹಿನ್ನೋಟ ಕುರಿತ ಕಿರುಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಳೆದ 6 ವರ್ಷದಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಭ್ರಷ್ಟಚಾರದ ಆರೋಪವಿಲ್ಲದೆ, ಅಭಿವೃದ್ಧಿ ಪರ್ವದತ್ತ ಸಾಗುತ್ತಿದೆ. ಸತತ ಎರಡನೇಯ ಅವಧಿ ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ಮೋದಿಜೀ ನಡೆಸಿಕೊಂಡು, ಎದುರಾದ ಸಮಸ್ಯೆ ಮತ್ತು ನೂರಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಮ್ಮು ಕಾಶ್ಮೀರದ 370 ರದ್ದತಿಗೊಳಿಸಿರುವದುದಂತ ಸೇರಿದಂತೆ ರಾಮ ಮಂದಿರ ನಿರ್ಮಾಣ ಕಠಿಣ ಸಮಸ್ಯೆಗಳನ್ನು ಮೋದಿಜೀಯವರು ಸಮರ್ಪಕವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೆ ದೇಶದಲ್ಲಿ ಏಕರೂಪದ ತೆರಿಗೆ, ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಎನ್ನುವ ಘೋಷಣೆಗಳೊಂದಿಗೆ ಅಭಿವೃದ್ದಿ ಪರ್ವ ನಡೆಸಿದ್ದಾರೆ. ಲಡಾಖನ ಸಮಸ್ಯೆ ಪರಿಹಾರ ಮತ್ತು ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 6 ಸಾವಿರ ಹಣ ರೈತರ ಖಾತೆಗೆ ನೇರ ಜಮೆ ಮತ್ತು ಕೊರೊನಾ ಸಮಸ್ಯೆಯನ್ನು ಸಮರ್ಪಕವಾಗಿ ಎದುರಿಸುವಲ್ಲಿ ಲಾಕ್ ಡೌನ್ ಸಮಸ್ಯೆಗಳಲ್ಲಿ ನೊಂದವರಿಗೆ ಪಡಿತರ ಹಂಚುವಿಕೆಯಲ್ಲಿ, ಒಂದು ದೇಶ ಒಂದು ಪಡಿತರ ಯೋಜನೆ ಜಾರಿಗೊಳಿಸಿರುವದು, ಜಲಜೀವನ್, ರೈತರ ಜಮೀನಿಗೆ ಕೊಳವೆ ಬಾವಿ, ಪ್ರತಿ ಕಾರ್ಮಿಕರ ಖಾತೆಗೆ ಮೂರು ಸಾವಿರ ಹಣ ನೇರ ಜಮೆ, ರಾಜ್ಯ ಸರ್ಕಾರದಿಂದ 6 ಸಾವಿರ ನೇರ ಹಣ ಜಮೆ ಮಾಡುವ ಮೂಲಕ ಕೊರೊನಾ ಸಂಕಟದಲ್ಲಿ ಎಲ್ಲರೊಂದಿಗೆ ಜೊತೆ ನಿಲ್ಲುವ ಮೂಲಕ ಜನಹಿತದ ಕಾಳಜಿಯನ್ನು ಬಿಜೆಪಿ ಪಕ್ಷ ತೋರಿಸಿದೆ.

ಹೀಗಾಗಿ ಇನ್ನೂ ಹತ್ತು ಹಲವು ಕಾರ್ಯಕ್ರಮಗಳು ಮೋದಿಜೀಯವರು ಕೈಗೊಂಡಿದ್ದು, ಅವರ ಕೊಡುಗೆ ದೇಶಕ್ಕೆ ಸಾಕಷ್ಟಿದೆ. ಮತ್ತು ಕಾರ್ಯಕರ್ತರಿಗೆ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡು ಅದರಂತೆ ಕಾರ್ಯಪ್ರವತ್ತರಾಗಲು ಕರೆ ನೀಡಿದ್ದಾರೆ. ಅವರ ಕರೆ ಮೇರೆಗೆ ಕಾರ್ಯಕರ್ತರೆಲ್ಲರೂ ನಾವು ಮನೆ ಮನೆ ಸಂಚರಿಸಿ ಮೋದೀಜೀಯವರ ಸಾಧನೆ ಕುರಿತು ಕಿರುಪತ್ರ ಹಂಚುವ ಮೂಲಕ ತಿಳಿಸುತ್ತಿದ್ದೇವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ದೇವಿಂದ್ರಪ್ಪ ಕೋನೇರ, ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಚಿಲ್ಲಾಳ, ಯಲ್ಲಯ್ಯ ನಾಯಕ ವನದುರ್ಗ ಇತರರಿದ್ದರು.

ಕೊರೊನಾ ತಡೆಗೆ ಕೈಗೊಂಡ ನಿರ್ಣಯ ಇತರೆ ರಾಷ್ಟ್ರಗಳಿಗೆ ಮಾದರಿ

ಕೊವಿಡ್-19 ಮಾರಕ ವೈರಸ್ ಎಲ್ಲಡೆ ಹರಡುತ್ತಿದ್ದಂತೆ ತಕ್ಷಣಕ್ಕೆ ಎಚ್ಚೆತ್ತುಕೊಂಡು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಅಳವಡಿಸಿರುವದು, ಅದರ ಬೆನ್ನ ಹಿಂದೆಯೇ ಲಾಕ್ ಡೌನ್ ಘೋಷಿಸಿ ಯಾರೊಬ್ಬರು ಹಸಿವಿನಿಂದ ಬಳಲಬಾರದೆಂದು ಪಡಿತರ ವಿತರಣೆ, ವಲಸೆ ಕಾರ್ಮಿಕರ ರಕ್ಷಣೆ, ಅನ್ಯ ದೇಶಗಳಲ್ಲಿ ವಆಸವಿದ್ದ ದೇಶದ ಜನರ ಸಂರಕ್ಷಣೆ ಎಲ್ಲವೂ ಸಮರ್ಪಕವಾಗಿ ನಿಭಾಯಿಸುವ ಮೂಲಕ ಇಡಿ ಪ್ರಪಂಚಕ್ಕೆ ಮಾದರಿ ಎನಿಸಿದರು.

ಲಾಕ್ ಡೌನ್ ನೀತಿ ಅಳವಡಿಕೆಗೆ ಕೈಗೊಂಡ ದಿಟ್ಟ ನಿರ್ಧಾರದಿಂದ ಇಡಿ ಜಗತ್ತಿಗೆ ಭಾರತ ಮಾದರಿ ಎನಿಸಿತು. ಈ ನಿರ್ಧಾರದಿಂದ ಭಾರತದಲ್ಲಿ ಕೊರೊನಾ ಹಾವಳಿ ಕಡಿಮೆಗೆ ಕಾರಣವಾಯಿತು. ಮುಂದೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿ ಕೊರೊನಾ ವಿರುದ್ಧ ಬಹುದೊಡ್ಡ ಸಮರ ಸಾರಿರುವದು ಇಡಿ ದೇಶಕ್ಕೆ ಗೊತ್ತ ವಿಷಯ ಎಂದು ಹಿರಿಯ ಮುಖಂಡ ಮಲ್ಲಿಕಾರ್ಜುನ ಚಿಲ್ಲಾಳ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button