ಪ್ರಮುಖ ಸುದ್ದಿ

ಯಾದಗಿರಿ ಡಿಸಿ ಕಚೇರಿಗೆ ಕಾಲಿಟ್ಟ ಕೊರೊನಾ.?

ಕೊರೊನಾ ಆತಂಕದ ನಡುವೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಯಾದಗಿರಿಃ ಕೊರೊನಾ ಮಹಾಮಾರಿ ಎಲ್ಲಡೆ ಆವರಿಸಿದ್ದು, ಪ್ರಾಥಮಿಕ ಹಂತದಲ್ಲಿ ಅಧಿಕಾರಿಗಳು ಕೊರೊನಾ ಹರಡಲಿರುವ ಜನ ಜಂಗುಳಿ ಪ್ರದೇಶ ಕಂಡು ಬರುವ ಎಲ್ಲ ಸ್ಥಳಗಳಿಗೂ ನಿರ್ಬಂಧ ಏರಿದರು. ಗುಡಿ ಗುಂಡಾರ, ಮಸೀದಿ, ಚರ್ಚ್ ಬಂದ್ ಮಾಡಿಸಿದರು.

ಇದೀಗ ಬಂದ್ ಮಾಡಿಸಿದ ಅಧಿಕಾರಿಗಳ ಕಚೇರಿ ಬಂದ್ ಮಾಡುವ ಸ್ಥಿತಿ ಬಂದಿದೆ. ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ಇಲಾಖೆಯ ಕಚೇರಿ‌ಗಳು, ಆಸ್ಪತ್ರೆಗಳು ಸಹ ಸೀಲ್ ಡೌನ್ ಆಗಿರುವದು ಕಾಣಬಹುದು.

ಅಂದಂತೆ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ 20 ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ತಗುಲಿದೆ ಎಂಬ ವಿಷಯ ಬಯಲಾಗಿದೆ. ಸಂಜೆ ವೇಳೆ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಪ್ರಕಟಿಸಲಿದೆ ಎನ್ನಲಾಗಿದೆ.

ಹೀಗಾಗಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಸೀಲ್ ಡೌನ್ ಮಾಡುವ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯ ಜಿಪಂ ಅಧ್ಯಕ್ಷರ ಆಯ್ಕೆ ಸಂಬಂಧಿಸಿದಂತೆ ಇಂದು ಚುನಾವಣೆ ನಡೆಯಲಿದೆ. ಆತಂಕದ ನಡುವೆಯೇ ಚುನಾವಣೆ ನಡೆಯಲಿದ್ದು, ಜಿಪಂ ಕಚೇರಿ ಸ್ಯಾನಿಟೈಸ್ ಮಾಡಿ ಚುನಾವಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಅಲ್ಲದೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇರುವ ಕಾರಣ ಜಿಪಂ ಕಚೇರಿ ಒಳಗಡೆ ಯಾರು ಹೋಗದಂತೆ ನಿರ್ಬಂಧಿಸಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಜಿಪಂ ಸದಸ್ಯರು ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button