ಪ್ರಮುಖ ಸುದ್ದಿ

ವ್ಯಕ್ತಿಯೋರ್ವನ ಅಸಹಜ ಸಾವುಃ ಪ್ರಕರಣ ದಾಖಲು

ವ್ಯಕ್ತಿಯೋರ್ವನ ಅಸಹಜ ಸಾವುಃ ಪ್ರಕರಣ ದಾಖಲು
ಶಹಾಪುರಃ ಬಾಂಡೆ ಸಾಮಾನು ಮಾರಾಟಗಾರ ಎನ್ನಲಾದ ರಾಜಕುಮಾರ (45) ಎಂಬಾತ ಬುಧವಾರ ರಾತ್ರಿ ಕುಡಿದ ಮತ್ತಿನಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ನಗರದ ಗಂಜ್ ಏರಿಯಾದಲ್ಲಿ ನಡೆದಿದೆ.

ಚಿಲ್ಲರೆ ಬಾಂಡೆ ಸಾಮಾಗ್ರಿ ಮಾರಾಟ ಮಾಡುತ್ತಿದ್ದ ಈತ ನಿತ್ಯ ಕುಡಿತದ ಚಟಕ್ಕೆ ಬಿದ್ದು ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ.
ಬುಧವಾರ ರಾತ್ರಿ ಕುಡಿದು ಮನೆಗೆ ಬಂದಿದ್ದು, ಮಗನ ಹತ್ತಿರ ಮತ್ತೆ ಕುಡಿಯಲು ಹಣ ಕೇಳಿದ್ದಾನೆ. ಮಗ ಹಣ ನೀಡದ ಕಾರಣ ಜಗಳವಾಡಿ ಹೊರಗಡೆ ಹೋಗಿದ್ದು, ಮರಳಿ ಮನೆಗೆ ಬಂದಿಲ್ಲ. ಗುರುವಾರ  ಹುಡುಕಾಟ ನಡೆಸುವಾಗ ಗಂಜ್ ಏರಿಯಾದ ಬಿಜೆಪಿ ಕಾರ್ಯಾಲಯದ ಹತ್ತಿರ ಯಾವುದೋ ಇಂಜಿನ್ ಬೆಲ್ಟ್‍ನಿಂದ ಕುತ್ತಿಗೆ ಬಿಗಿದುಕೊಂಡು ಮೃತಪಟ್ಟಿರುವದು ಗೊತ್ತಾಗಿದೆ ಎಂದು ಫಿರ್ಯಾದಿದಾರ ಮೃತ ರಾಜಕುಮಾರ ಮಗ ಸುನೀಲ್ ದೂರಿನಲ್ಲಿ ತಿಳಿಸಿದ್ದಾನೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
———

Related Articles

Leave a Reply

Your email address will not be published. Required fields are marked *

Back to top button