ಪ್ರಮುಖ ಸುದ್ದಿ
ನನಗೆ ನಿಗಮ ಮಂಡಳಿ ಬೇಡ- ಎಂ.ಪಿ.ಕುಮಾರಸ್ವಾಮಿ ಹೇಳಿಕೆ
ನನಗೆ ನಿಗಮ ಮಂಡಳಿ ಬೇಡ, ಗ್ರ್ಯಾಂಟ್ ಕೊಟ್ರೆ ಸಾಕು- ಎಂ.ಪಿ.ಕುಮಾರಸ್ವಾಮಿ
ಚಿಕ್ಕಮಗಳೂರುಃ ನನಗೆ ಯಾವ ನಿಗಮ ಮಂಡಳಿಯೂ ಬೇಡ ನನ್ನ ಕ್ಷೇತ್ರಕ್ಕೆ ಸಮರ್ಪಕ ಗ್ರ್ಯಾಂಟ್ ಕೊಟ್ರೆ ಸಾಕು ಎಂದು ಜಿಲ್ಲೆಯ ಮೂಡಿಗೇರಿ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅಸಮಾಧಾನ ಇದ್ದೋರಿಗೆ ಯಾರಿಗಾದರೂ ನೀಡಿ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಗಾಗಿ ಗ್ರ್ಯಾಂಟ್ ನೀಡಿ. ನಾನು ಯಾವುದೇ ಅಸಮಾಧಾನಗೊಂಡಿಲ್ಲ. ನಾನು ಬಿಎಸ್ ವೈ ಶಿಷ್ಯ ಎಂದು ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.




