ಪ್ರಮುಖ ಸುದ್ದಿ
EMI ಕುರಿತು ಕೇಂದ್ರ ಸ್ಪಷ್ಟ ನಿಲುವು ತಿಳಿಸಲಿ- ಗುಂಡೂರಾವ್
ಬೆಂಗಳೂರಃ EMI ವಿಚಾರದಲ್ಲಿ ಸ್ಪಷ್ಟ ನಿಲುವು ತಿಳಿಸಲು ಕೇಂದ್ರ ಸರ್ಕಾರಕ್ಕೆ ಬಂದಿರೋ ರೋಗವೇನು? ಎಂದು ಕಾಂಗ್ರೆಸ್ ನಾಯಕ ದಿನೇಶ ಗುಂಡೂರಾವ್ ಟ್ವಿಟ್ ಮೂಲಕ ಕೇಂದ್ರ ಬಿಜೆಪಿ ಸರ್ಕಾರಕ್ಕೆ ತಿವಿದಿದ್ದಾರೆ.
ಬ್ಯಾಂಕುಗಳು ಗ್ರಾಹಕರಿಗೆ ಸಾಲ ವಸೂಲಾತಿಯ ನೋಟೀಸ್ ಕೊಡುತ್ತಿವೆ. ಆರ್ಥಿಕ ಸಂಕಷ್ಟದಲ್ಲಿರುವ ಜನ ಸರ್ಕಾರದ ಎಡಬಿಡಂಗಿ ನಿಲುವಿನಿಂದ ಗೊಂದಲದಲ್ಲಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಜನರ ಹಿತ ಮುಖ್ಯವಾಗಿದ್ದರೆ ತನ್ನ ನಡೆಯನ್ನು ಪಾರದರ್ಶಕವಾಗಿ ತಿಳಿಸಲಿ..!! ಎಂದು ಗುಂಡೂರಾವ್ ಆಗ್ರಹಿಸಿದ್ದಾರೆ.




