ಪ್ರಮುಖ ಸುದ್ದಿ
ಲಂಚ ಪಡೆಯುತ್ತಿದ್ದ ಕೃಷಿ ಅಧಿಕಾರಿ ಎಸಿಬಿ ಬಲೆಗೆ
ಲಂಚ ಪಡೆಯುತ್ತಿದ್ದ ಕೃಷಿ ಅಧಿಕಾರಿ ಎಸಿಬಿ ಬಲೆಗೆ
ಕಲಬುರ್ಗಿಃ ಕೃಷಿ ಸಲಕರಣೆಗಳ ವಿತರಣೆಗೆ ಬಿಲ್ ಪಾಸ್ ಮಾಡಲು ಬೇಡಿಕೆ ಇಟ್ಟಿದ್ದ ಜೇವರ್ಗಿಯ ಕೃಷಿ ಸಹಾಯಕ ಅಧಿಕಾರಿ ಸುನೀಲ್ ಕುಮಾರ ಮುಂಗಡವಾಗಿ 50 ಸಾವಿರ ರೂಪಾಯಿ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೃಷಿ ಸಲಕರಣೆ ಬಿಲ್ ಪಾಸ್ ಮಾಡಲು ವ್ಯಕ್ತಿಯೊಬ್ಬರಿಗೆ ಒಂದುವರೆ ಲಕ್ಷ ಬೇಡಿಕೆ ಇಟ್ಟಿದ್ದ ಕೃಷಿ ಸಹಾಯಕ ಅಧಿಕಾರಿ ಸುನೀಲ್ ಕುಮಾರ ಮುಂಗಡವಾಗಿ 50 ಸಾವಿರ ರೂ. ಕಲ್ಬುರ್ಗಿ ನಗರದ ಕನ್ನಡ ಭವನದ ಬಳಿ ಪಡೆಯುತ್ತಿರುವಾಗ ಎಸಿಬಿ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ.
ಸದ್ಯ ಎಸಿಬಿ ವಶದಲ್ಲಿರುವ ಸುನೀಲಕುಮಾರ ವಿಚಾರಣೆ ನಡೆಯುತ್ತಿದೆ. ಸಮರ್ಪಕ ಮಾಹಿತಿ ಪಡೆದಯಕೊಂಡು ಎಸಿಬಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.