ಪ್ರಮುಖ ಸುದ್ದಿ
ಗುಡ್ಡ ಕುಸಿದು ಮನೆ ನೆಲಸಮಃ ಸ್ಥಳೀಯರ ಸಮಯ ಪ್ರಜ್ಞೆ 6 ಜನ ಬಚಾವ್.!
ಗುಡ್ಡ ಕುಸಿದು ಮನೆ ನೆಲಸಮಃ ಜನರ ಸಮಯ ಪ್ರಜ್ಞೆ 6 ಜನ ಬಚಾವ್
ದಕ್ಷಿಣ ಕನ್ನಡಃ ಮನೆಯೊಂದರ ಮೇಲೆ ಗುಡ್ಡ ಕುಸಿದ ಪರಿಣಾಮ ಮನೆ ನೆಲಸಮಗೊಂಡಿದ್ದು, 6 ಜನರು ಗಾಯಗಿಂಡ ಘಟನೆ ಬನಾರಿ ಬಾಬುಕಟ್ಟೆ ಗ್ರಾಮದಲ್ಲಿ ನಡೆದಿದೆ.
ತರಕಾರಿ ವ್ಯಾಪಾರಿ ಅಬ್ದುಲ್ ಎಂಬುವರ ಮನೆಯ ಪಕ್ಕದ ಗುಡ್ಡ ಜೋರಾದ ಮಳೆಗೆ ನೆನದಿದ್ದು, ಗಾಳಿಗೆ ಕುಸಿದು ಮೆನೆ ಮೇಲೆ ಬಿದ್ದಿದೆ. ನೆಲಸಮಗೊಂಡ ಮನೆಯಡಿ ಒಂದೇ ಕುಟುಂಬದ ಆರುಜನರ ಅವಶೇಷದಡಿ ಸಿಲುಕಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಚಾವ್ ಆಗಿದ್ದಾರೆ.
ಮನೆ ಯಜಮಾನ ಅಬ್ದುಲ್, ಪತ್ನಿ ಜೋಹಾರ್ ಮಕ್ಕಳಾದ ಅರಫಾಝ್, ಇರ್ಫಾನ್, ತಸ್ಲೀಮಾ,ಮಿಶ್ರಿಯಾ ಗಾಯಗೊಂಡಿದ್ದು ಇವರನ್ನು ವಿಟ್ಲ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಾಣಪಾಯದಿಂದ ಕುಟುಂಬ ಪಾರಾಗಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದಂತಾಗಿದೆ.