ಪ್ರಮುಖ ಸುದ್ದಿ

BSY ಸಿಎಂ ಸ್ಥಾನದಿಂದ ಇಳಿಯುವುದು ನಿಶ್ಚಿತ – ಸಿದ್ರಾಮಯ್ಯ

BSY ಸಿಎಂ ಸ್ಥಾನದಿಂದ ಇಳಿಯುವುದು ನಿಶ್ಚಿತ – ಸಿದ್ರಾಮಯ್ಯ

ಬೆಂಗಳೂರಃ ಯಡಿಯೂರಪ್ಪ ಸಿಎಂ ಖುರ್ಚಿಯಿಂದ ಇಳಿಯುವುದು ಖಚಿತವಾಗಿದೆ. ಹೀಗಾಗಿ‌ ಅವರು ತಮ್ಮ ಸ್ಥಾನ ಭದ್ರತೆಗಾಗಿ‌ ತರಾತುರಿಯಲ್ಲಿ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ತಮ್ಮ ಸ್ಥಾನ ಭದ್ರತೆಗಾಗಿ ಬಡಿದಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದಿಂದ ಇಳಿಸಬಹುದು ಎಂಬ ಆತಂಕ ಅವರಲ್ಲಿದೆ. ಮೊದಲೇ ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇದೆ. ಇಂತಹ ಸ್ಥಿತಿಯಲ್ಲೂ ಮಂಡಳಿ ನಿಗಮಗಳಿಗೆ ನೇಮಕ ಮಾಡಿರುವದು ಸರಿಯಲ್ಲ. ಇದು ಅಭಿವೃದ್ಧಿ ದಾರಿ ಅಲ್ಲ. ತಮ್ಮ ಖುರ್ಚಿ ಉಳಿವಿಗಾಗಿ ಒಣ ಕಸರತ್ತು ನಡೆಸಿದಂತಿದೆ ಎಂದು ಟೀಕಿಸಿದರು.

ಅಲ್ಲದೆ ಖಾಸಗಿ‌ ಶಾಲಾ, ಕಾಲೇಜು ಸಂಸ್ಥೆಗಳು ವಿದ್ಯಾರ್ಥಿ ಪೋಷಕರು ಶುಲ್ಕ ನೀಡದೆ ಇದ್ರೆ ಆನ್ ಲೈನ್ ಕ್ಲಾಸ್ ಸೌಲಭ್ಯ ಸ್ಥಗಿತಗೊಳಿಸಲಾಗುವುದು ಎಂದು ಹೇಳುತ್ತಿರುವದು ಸರಿಯಲ್ಲ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆ ಗಳೊಡನೆ ಶಾಮೀಲಾಗಿದ್ದು, ವಿದ್ಯಾರ್ಥಿಗಳಿಗಾಗಿ‌ ಏನು ಮಾಡುತ್ತಿಲ್ಲ. ಸ್ಪಷ್ಟ ನಿರ್ಧಾರ‌ ಪ್ರಕಟಿಸುತ್ತಿಲ್ಲ. ಇದು ಬರಿ ಹಣ ಲೂಟಿ ಮಾಡುವ ಸ‌ರ್ಕಾರ ಎಂದು ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Back to top button