ಪ್ರಮುಖ ಸುದ್ದಿ

ಶಹಾಪುರ-ಬೆಂಗಳೂರ ಬಸ್ ಪಲ್ಟಿ ಇಬ್ಬರ ಸಾವು

ಶಹಾಪುರ-ಬೆಂಗಳೂರ ಬಸ್ ಪಲ್ಟಿ ಇಬ್ಬರ ಸಾವು

ಯಾದಗಿರಿಃ ಜಿಲ್ಲೆಯ ಶಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಸರ್ಕಾರಿ ಬಸ್ ಚಾಲಕನ ಅಜಾಗರುಕತೆಯಿಂದ ಬಸ್ ಪಲ್ಟಿಯಾಗಿದ್ದು ಓರ್ವ ಬಾಲಕಿ ಮತ್ತು ಒಬ್ಬ ವ್ಯಕ್ತಿ ಮೃತಪಟ್ಟ ಘಟನೆ ಇಂದು (ಡಿ.06) ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಪಟ್ಟಣ ಬಳಿ ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಬಸ್ ನಲ್ಲಿದ್ದ ಯಾದಗಿರಿ ಮೂಲದ ಐಶ್ವರ್ಯ (12) ಶಹಾಪುರ ಮೂಲದ ಬಸವರಾಜ(33) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿಗಳು. ಅಲ್ಲದೆ ಬಸ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಹಿರಿಯೂರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹಿರಿಯೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button