ಪ್ರಮುಖ ಸುದ್ದಿ

ಯಾದಗಿರಿಃ ರಾತ್ರಿ ಸುರಿದ ಧಾರಕಾರ ಮಳೆಗೆ ಜನತೆ ತತ್ತರ, ಶಹಾಪುರದಲ್ಲಿ ಮಕ್ಕಳ ಮೇಲೆ ಗೋಡೆ ಕುಸಿತ

ಶಹಾಪುರಃ ಆಟವಾಡುತ್ತಿದ್ದ ಮಕ್ಕಳ ಮೇಲೆ ನೆನೆದ ಗೋಡೆ ಕುಸಿತ, ಗಂಭೀರ ಗಾಯ

ಅಪಾರ ಪ್ರಮಾಣದ ಬೆಳೆ ಹಾನಿ, ಕ್ಯಾತನಾಳದಲ್ಲಿ ಮನೆಗೆ ನುಗ್ಗಿದ ನೀರು ಜನರ ಪರದಾಟ 

ಯಾದಗಿರಿಃ ಜಿಲ್ಲಾದ್ಯಂತ ಸೋಮವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಹಲವಡೆ ಮನೆ ಬಿದ್ದು, ಪ್ರಾಣಪಾಯದಿಂದ ಪಾರಾದರೆ, ಇನ್ನೊಂದಡೆ ಗ್ರಾಮದ ಕೆರೆ ಕೋಡಿ ಒಡೆದು ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಬೆಳಗಿನ ಜಾವದವರೆಗೆ ಜಾಗರಣೆ ಮಾಡಿದರೆ, ಮತ್ತೊಂದಡೆ ಹೊಲದಲ್ಲಿ ಬೆಳೆದ ಬೆಳೆಗಳು ಮಳೆ, ಗಾಳಿ ರಭಸಕ್ಕೆ ನೆಲಕಚ್ಚಿದ್ದು ಅಪಾರ ಹಾನಿಯಾದÀ ಘಟನೆಗಳು ಜರುಗಿವೆ.
ಜಿಲ್ಲೆಯ ಶಹಾಪುರ ತಾಲೂಕಿನ  ಮಡ್ನಾಳ ಗ್ರಾಮದಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ 7 ಜನರು ಗಾಯಗೊಂಡ ಘಟನೆ ಜರುಗಿದೆ. ರಾತ್ರಿ ಇಡಿ ಮಳೆ ಸುರಿದ ಪರಿಣಾಮ ಗೋಡೆಯೊಂದು ನೆನೆದು ನೆಲಕ್ಕೆ ಉರುಳಿದೆ. ಗೋಡೆ ಪಕ್ಕದಲ್ಲಿ ಕುಳಿತ ಹಿರಿಯರಿಬ್ಬರು ಸೇರಿದಂತೆ ಆಲ್ಲಿಯೇ ಆಟವಾಡುತ್ತಿದ್ದ 5 ಜನ ಮಕ್ಕಳ ಮೇಲೆ ಗೋಡೆ ಬಿದ್ದ ಪರಿಣಾಮ ಮಕ್ಳು ತೀವ್ರ ಗಾಯಗೊಂಡಿದ್ದು, 7 ಜನರು ನಗರದ ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.


ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆಸ್ಪತ್ರೆಗೆ ದಾಖಲಾದ ಗಾಯಾಳುಗಳನ್ನು ಭೇಟಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ಇದೇ ತಾಲೂಕಿನ ಕ್ಯಾತನಾಳ ಗ್ರಾಮದ ಕೆರೆ ಕೋಡಿ ಒಡೆದ ಪರಿಣಾಮ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗಿದ್ದು, ಗ್ರಾಮದ ಬಹುತೇಖ ಮನೆಗಳಲ್ಲಿ ನೀರು ನಿಂತಿದೆ. ಹೀಗಾಗಿ ಗ್ರಾಮಸ್ಥರು ಬೆಳಗಿನಜಾವದವರಗೆ ಜಾಗರಣೆ ಮಾಡಿದ ಘಟನೆಯು ಜರುಗಿದೆ. ಗ್ರಾಮದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಾಗರಿಕರು ಪರದಾಡುವಂತಾಗಿದೆ. ಮಕ್ಕಳು ವೃದ್ಧರು ಇಡಿ ರಾತ್ರಿ ಪರಿತಪಿಸಿದ್ದಾರೆ. ಹಲವರ ಮನೆಯಲ್ಲಿನ ಧವಸ ಧಾನ್ಯಗಳು ನೀರು ಪಾಲಾಗಿವೆ. ಹಾಸಿಗೆ, ಬಟ್ಟೆಬರೆಗಳು ನೀರಲ್ಲಿ ಮುಳುಗಿದ್ದು, ಗ್ರಾಮ ಇಡಿ ತೇವಾಂಶದಿಂದ ಕೂಡಿದ್ದು ಕೌದಿ, ಬಟ್ಟೆ ಒಣಗಿಸಲು ಸಮಯ ವಾತಾವರಣ ಇಲ್ಲದಂತಾಗಿ ಜನರು ತತ್ತರಿಸಿದ್ದಾರೆ.


ಇಷ್ಟೆ ಅಲ್ಲದೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಜಮೀನುಗಳ ಅಪಾರ ಪ್ರಮಾಣ ನೀರು ಸಂಗ್ರಹಗೊಂಡಿದ್ದು, ಭತ್ತ, ಹತ್ತಿ ಮತ್ತು ತೊಗರೆ ಬೆಳೆ ನಾಶವಾದ ವರದಿಯಾಗಿದೆ. ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಹೀಗಾಗಿ ಕಳೆದ ವಾರದಿಮದ ನಳನಳಿಸುತ್ತಿದ್ದ ಬೆಳೆ ಪ್ರಸ್ತುತ ರಾತ್ರಿ ಸುರಿದ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ರೈತಾಪಿ ಜನರಲ್ಲಿ ಮತ್ತೇ ಸಂಕಷ್ಟ ಶರುವಾಗಿದೆ.

Related Articles

Leave a Reply

Your email address will not be published. Required fields are marked *

Back to top button