ಆರ್ಥಿಕವಾಗಿ ಸಬಲರಾಗಲು ಶಿಕ್ಷಣ ಅತ್ಯಗತ್ಯ – ಉತ್ತರಾದೇವಿ
ಯಾದಗಿರಿಃ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ
ಆರ್ಥಿಕವಾಗಿ ಸಬಲರಾಗಲು ಶಿಕ್ಷಣ ಅಗತ್ಯ – ಉತ್ತರಾದೇವಿ
ಯಾದಗಿರಿಃ ಸ್ತ್ರೀ- ಪುರುಷ ಎಂಬ ಬೇದ ಬೇಡ. ಪರಸ್ಪರರಲ್ಲಿ ಸಹಾಯ, ಸಹಕಾರ, ಪ್ರೋತ್ಸಾಹ, ಪ್ರೇರಣೆಯಿಂದ ಸ್ತ್ರೀ- ಪುರುಷರು ಬದುಕಿನ ಯಾವುದೇ ಸಾಧನೆ ಮಾಡಲು, ಉನ್ನತ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉತ್ತರಾದೇವಿ ಅವರು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು ಸಾಧನೆಗೆ ಸ್ತ್ರೀ – ಪುರುಷರ ಎಂಬ ಬೇದ ಇಲ್ಲ. ಶ್ರಧ್ದೆಯ ಅಧ್ಯಯನ, ಕಠಿಣ ಪರಿಶ್ರಮ, ಸಾಧನೆಯ ಛಲ, ಪ್ರಮಾಣಿಕ ಪ್ರಯತ್ನ ಇದ್ದರೆ ಉನ್ನತವಾದುದ್ದನ್ನು ಸಾಧಿಸಬಹುದಾಗಿದೆ. ಪತಿ, ಎರಡು ಮಕ್ಕಳೊಂದಿಗೆ ಸಂಸಾರಿಕ ಬದುಕು ಸಾಗಿಸುತ್ತ ಓದಿ ಅಧಿಕಾರಿಯಾಗಿದ್ದೆನೆ. ಇದಕ್ಕೆ ನಮ್ಮ ಕುಟುಂಬದವರು ನೀಡಿದ ಸಹಾಯ, ಸಹಕಾರ ಯಾವತ್ತೂ ಮರೆಯುವಂತಿಲ್ಲ. ಶಿಕ್ಷಣದ ಅವಕಾಶಗಳನ್ನು, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಉದ್ಯೋಗಗಳನ್ನು ಪಡೆದು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಿ, ಆರ್ಥಿಕವಾಗಿ ಸಬಲರಾಗಿ ತಂದೆ, ತಾಯಿಗಳಿಗೆ, ಜ್ಞಾನ ನೀಡಿದ ಗುರುಗಳಿಗೆ, ಶಿಕ್ಷಣ ಸಂಸ್ಥೆಗೆ, ಸಮಾಜಕ್ಕೆ ಕೀರ್ತಿ ತರುವಂತಹ ಹೆಮ್ಮೆಯ ವಿಧ್ಯಾರ್ಥಿಗಳಾಗಬೇಕು ಎಂದು ಹಲವಾರು ನಿರ್ದೇಶನಗಳ ಮೂಲಕ ತಿಳಿಸಿಕೊಟ್ಟರು. – ಇತಿಹಾಸ ಉಪನ್ಯಾಸಕಿ ಡಾ. ನಾಗೀಣಿ ಅವರು ಮಾತನಾಡಿ ಮಹಿಳಾ ದಿನಾಚರಣೆ ಸ್ತ್ರೀ ಮತ್ತು ಪರಸ್ಪರ ಮಾನವೀಯ ಸಂಬಂಧಗಳ, ಸಾಧನೆಗಳ ವಿಚಾರಗಳ ವಿನಿಮಯಕ್ಕೆ ಹಾಗೂ ಮಹಿಳಾ ಸಾಧಕಿಯರ ಸಾಧನೆಗಳ ಹಿಂದೆ ಪುರುಷರ ಸಹಾಯ, ಪ್ರೇರಣೆ, ಪುರುಷರ ಸಾಧನಗೆ ಮಹಿಳೆಯರ ಸ್ಪೂರ್ತಿದಾಯಕ ಕಾರ್ಯಗಳ ಮುನ್ನುಡಿ ಬರೆಯಲಿ ಎಂದು ಆಶಯ ವ್ಯಕ್ತಪಡಿಸಿದರು. ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಡಾ. ಶಿವಗಂಗಾ ಅವರು ಮಹಿಳಾ ಸಾಧನೆಯ ವಿವಿಧ ಆಯಾಮಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಹರೀಶ ರಾಥೋಡ ಅವರು ಮಹಿಳಾ ಸಂವೇದನೆ ಹಾಗೂ ಸಾಧನೆಗಳ ಕುರಿತು ಮಾತನಾಡಿದರು. ಸಾಂಸ್ಕೃತಿಕ ಸಂಚಾಲಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಧ್ಯಾಸಾಗರ ಅವರು ಪ್ರಾಸ್ತಾವಿಕ ಮಾತನಾಡಿ ಕಳೆದ ಹಲವು ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ತುಂಬಾ ವಿಶಿಷ್ಠವಾಗಿ ಆಚರಿಸಲಾಗುತ್ತಿದೆ. ಈ ಆಚರಣೆಯ ಪ್ರಯುಕ್ತ ವಿವಿಧ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಧ್ಯಾರ್ಥಿನಿಯರ ಪ್ರತಿಭೆ, ಕೌಶಲ್ಯ, ಸಾಮರ್ಥ್ಯ, ಜ್ಞಾನ ಅನಾವರಣಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಮಹಿಳಾ ಅಧ್ಯಾಪಕಿಯರನ್ನು ಮತ್ತು ಮಹಳಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಾಪಕರಾದ ಡಾ.ಪುರುಷೋತ್ತಮ, ಡಾ. ರಾಜಶೇಖರ, ಡಾ. ವಿಜಯಕುಮಾರ, ಡಾ. ಗುಲಾಬಸಿಂಗ್, ಡಾ. ಚಂದ್ರಪ್ರಾಸಾದ, ಡಾ. ಶ್ರೀಶೈಲ ಪೂಜಾರಿ, ಡಾ. ಪ್ರಭುಗೌಡ, ಡಾ. ಹಣಮಂತ್ರಾಯ, ಡಾ. ಗೀತಾಬಾಯಿ, ವಿಜಯಲಕ್ಷ್ಮಿ, ಡಾ. ಗೀತಾ. ಜಿ.ಎಚ, ಡಾ. ಭಾರತಿ, ಡಾ.ಕಿನ್ನು ಜಾದವ್, ಡಾ.ರವಿ ಪವಾರ್, ಗೋವಿಂದರಾಜ, ಡಾ. ಮಾನಪ್ಪ, ಪುಷ್ಪಾ ಪೂಜಾರಿ, ಫಿಲೊಸೀಯಾ, ಶರಣಮ್ಮಾ, ರಡ್ಡಿ ನಾಗವೇಣಿ, ಡಾ.ರಾಘವೇಂದ್ರ ಹಾರಣಗೇರಾ, ಜುಲೇಖಾ ಬೇಗಂ ಮುಂತಾದವರು ಉಪಸ್ಥಿತರಿದ್ದರು. ಕು. ಶ್ರೀದೇವಿ ನಿರೂಪಿಸಿದರು, ಕು. ಭಾಗಮ್ಮ ಪ್ರಾರ್ಥಿಸಿದರು, ಕು. ಭಾಗ್ಯಶ್ರಿ ವಂದಿಸಿದರು. ಐಶ್ವರ್ಯ, ವಿಧ್ಯಾ, ರೋಹಿಣಿ, ಸುಪ್ರೀಯಾ ನಿರ್ವಹಿದರು.




