ಪ್ರಮುಖ ಸುದ್ದಿ
ಕರಾವಳಿಯಲ್ಲಿ ಮತ್ತೆ ಕೋಮು ಸಂಘರ್ಷ!
ಮಂಗಳೂರು: ತಾಲೂಕಿನ ಕಾಟಿಪಾಳ್ಯ ಗ್ರಾಮದಲ್ಲಿ ಬ್ಯಾನರ್ ಕಟ್ಟುವ ವಿಷಯದಲ್ಲಿ ಎರಡು ಕೋಮಿನ ಯುವಕರ ಗುಂಪು ಕೈಕೈ ಮಿಲಾಯಿಸಿದ ಘಟನೆ ನಡೆದಿದೆ. ಒಂದು ಗುಂಪು ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಶುಭ ಕೋರುವ ಬ್ಯಾನರ್ ತೆರವುಗೊಳಿಸಿ ಮುಂಬರುವ ಹಬ್ಬಕ್ಕೆ ಶುಭ ಕೋರುವ ಬ್ಯಾನರ್ ಕಟ್ಟಲು ಮುಂದಾಗಿದೆ. ಮತ್ತೊಂದು ಗುಂಪು ಬ್ಯಾನರ್ ತೆರವುಗೊಳಿಸುವುದನ್ನು ವಿರೋಧಿಸಿದಾಗ ಎರಡು ಗುಂಪುಗಳ ಮದ್ಯೆ ನಿನ್ನೆ ರಾತ್ರಿ ವೇಳೆ ಸಂಘರ್ಷ ನಡೆದಿದೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟೆಚ್ಚರವಹಿಸಿದ್ದಾರೆ.