ಪ್ರಮುಖ ಸುದ್ದಿ
ಸಮುದ್ರದಲ್ಲಿ ಮುಳುಗಿದ 14ಜನರಿದ್ದ ಎರಡು ಹಡಗು; ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ!
ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಓಖಿ ಚಂಡಮಾರುತದಿಂದಾಗಿ ಲಕ್ಷದ್ವೀಪ ಸಮೀಪದ ಕವರತಿ ಬಳಿ ಸಮುದ್ರದಲ್ಲಿ ಭಾರೀ ಅಲೆಗಳು ಎದ್ದಿದ್ದು ಎರಡು ಹಡಗುಗಳು ಮುಳುಗಡೆ ಆಗಿರುವ ಘಟನೆ ನಡೆದಿದೆ. ದಿನಸಿ, ತರಕಾರಿ ಮತ್ತಿತರೆ ಸಾಮಗ್ರಿಗಳನ್ನು ಹೊತ್ತು ನವೆಂಬರ 29ರಂದು ಮಂಗಳೂರಿನಿಂದ ಲಕ್ಷದ್ವೀಪದತ್ತ ಹೊರಟಿದ್ದ ಮಂಗಳೂರು ಹಾಗೂ ತಮಿಳುನಾಡು ಮೂಲದ ಎರಡು ಹಡಗುಗಳು ಸಮುದ್ರದಲ್ಲಿ ಮುಳುಗಿವೆ.
ಎರಡು ಹಡಗುಗಳಲ್ಲಿ ಒಟ್ಟು 14ಜನರಿದ್ದರು. ಹೀಗಾಗಿ, ಜನರ ರಕ್ಷಣೆಗಾಗಿ ಹೆಲಿಕಾಪ್ಟರ್ ಬಳಸಲಾಗಿದ್ದು ಹಡಗು ಮುಳುಗುತ್ತಿರುವ ಸ್ಥಳ ಗುರುತಿಸಿ ಹಡಗಿನಲ್ಲಿದ್ದ ಜನರನ್ನು ರಕ್ಷಿಸುವ ಕಾರ್ಯ ನಡೆದಿದೆ. ಈಗಾಗಲೇ ಮೊದಲ ಹಂತದಲ್ಲಿ ಹಡಗಿನಲ್ಲಿದ್ದ ನಾಲ್ಕು ಜನರನ್ನು ರಕ್ಷಿಸಲಾಗಿದೆ. ಇನ್ನುಳಿದ ಹತ್ತು ಜನ ಹಡಗಿನಲ್ಲಿ ಜೀವಭಯದಲ್ಲಿ ಕುಳಿತಿದ್ದು ಆ ಹತ್ತು ಜನರನ್ನೂ ಸಹ ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಅವರೆಲ್ಲರೂ ಸಹ ಸುರಕ್ಷಿತವಾಗಿ ದಡ ಸೇರಲಿ ಎಂಬುದು ವಿನಯವಾಣಿ ಆಶಯ.