ಪ್ರಮುಖ ಸುದ್ದಿ
ಮಳೆ ಹುಡುಗಿ ಪೂಜಾ ಗಾಂಧಿಗೆ ಕ್ಲೀನ್ ಚಿಟ್!
ರಾಯಚೂರು: ರಾಯಚೂರು ನಗರ ಕ್ಷೇತ್ರದಿಂದ ಬಿಎಸ್ಆರ್ ಪಕ್ಷದ ಅಬ್ಯರ್ಥಿಯಾಗಿ 2013ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಟಿ ಪೂಜಾ ಗಾಂಧಿ ವಿರುದ್ಧ ನಗರದ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಅನುಮತಿ ಇಲ್ಲದೆ ಪೂಜಾ ಗಾಂಧಿ ಚುನಾವಣ ಪ್ರಚಾರಕ್ಕೆ ಕಾರು ಬಳಸಿದ ಆರೋಪವಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನಟಿ ಪೂಜಾ ಗಾಂಧಿ ಅವರನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ.
ಈ ಮೊದಲು ನಟಿ ಪೂಜಾ ಗಾಂಧಿ ಸರಿಯಾಗಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಒಂದು ದಿನ ಮದ್ಯಾನದವರೆಗೆ ಕೋರ್ಟಿನಲ್ಲಿ ಕಾದು ಕೂಡಬೇಕಾಗಿತ್ತು. ಬಳಿಕ ಕಳೆದ ಎರಡು ತಿಂಗಳುಗಳಿಂದ ನಟಿ ಪೂಜಾ ತಪ್ಪದೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಇಂದು ಆರೋಪ ಮುಕ್ತರಾಗಿದ್ದು ಪೂಜಾ ಗಾಂಧಿಗೆ ರಿಲೀಫ್ ಸಿಕ್ಕಿದೆ.