ಕಳಸ ಬಂಡೂರಿ ಕೊಳ್ಳಕ್ಕೆ ಗೋವಾ ಸಿಎಂ ದಿಡೀರ್ ಭೇಟಿ
ಗೋವಾಃ ಕಳಸಾ ಬಂಡೂರಿ ಕೊಳ್ಳಕ್ಕೆ ಗೋವಾ ಸಿಎಂ ಪರಿಕರ್ ದಿಡೀರ್ ಭೇಟಿ ನೀಡಿ ಪರಿಶೀಲನೆ ಕೈಗೊಂಡಿರುವುದು ಕುತುಹಲ ಕೆರಳಿಸಿದೆ.
ಅದರಲ್ಲೂ ಕರ್ನಾಟಕ ಭಾಗದ ಮಹದಾಯಿ ಕೊಳ್ಳಕ್ಕೆ ಭೇಟಿ ನೀಡಿರುವುದು ಇನ್ನಷ್ಟು ಚಿಂತನೆಗೆ ಎಡೆಮಾಡಿದೆ. ಸಿಎಂ ಪರಿಕ್ಕರ್ ಜೊತೆ ಗೋವಾ ಅಸೆಂಬ್ಲಿ ತಂಡ ಸಾಥ್ ನೀಡಿದೆ.
ಪ್ರಮುಖವಾಗಿ ಕರ್ನಾಟಕ ಭಾಗದ ಕಳಸಾ ಬಂಡೂರಿ ಕೊಳ್ಳಕ್ಕೆ ಭೇಟಿ ನೀಡಿದ ಅವರು, ಸಮರ್ಪಕ ಮಾಹಿತಿ ಕಲೆ ಹಾಕಲಾಗುತಿದ್ದಾರೆ ಎನ್ನಲಾಗಿದೆ.
ಅಲ್ಲದೆ ಗೋವಾ ಸಿಎಂ ಕರ್ನಾಟಕ ಭಾಗದ ಮಹದಾಯಿ ಕೊಳ್ಳಕ್ಕೆ ಭೇಟಿ ನೀಡುತ್ತಿರುವ ಯಾವುದೇ ಮುನ್ಸೂಚನೆ ಇಲ್ಲಿನ ಅಧಿಕಾರಿಗಳಿಗೆ ಇಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಏನು ಹೇಳಲಿದೆ ಎಂಬುದು ಕಾಯ್ದು ನೋಡಬೇಕಿದೆ.
ಇದೆಲ್ಲ ಗೌಪ್ಯವಾಗಿ ನಡೆಯುತ್ತಿದ್ದು, ಗೋವಾ ನಿಯೋಗ ದಿಡೀರ್ ಭೇಟಿ ನೀಡಿರುವ ಕುರಿತು ಸಿಎಂ ಸಿದ್ರಾಮಯ್ಯನವರೇ ಸ್ಪಷ್ಟನೆ ನೀಡಬೇಕಿದೆ.
ಸಿಎಂ ಪರಿಕರ್ ಜೊತೆ ಸ್ಪೀಕರ್ ಪ್ರಮೋದ ಸಾವಂತ್, ಡೆಪ್ಯೂಟಿ ಸ್ಪೀಕರ್ ಮೈಖೆಲ್ ಲೋಬೋ, ಜಿಟಿಡಿಸಿ ಛೇರ್ಮನ್ ನಿಲೇಶ್ ಕ್ಯಾಬ್ರಿಲ್, ಶಾಸಕ ಪ್ರಸಾದ್ ಗಾಂವ್ಕರ್, ರೆನಾಲ್ಡ್ ಲಾರೆನ್ಸ್ ನಿಯೋಗದಲ್ಲಿದ್ದರು.