ಪ್ರಮುಖ ಸುದ್ದಿ

ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸ್ವಾಗತ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಬೃಹತ್ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಹೀಗಾಗಿ, ಈಗಾಗಲೇ ಬೃಹತ್ ವೇದಿಕೆ ಸಿದ್ಧಗೊಂಡಿದ್ದು ಇಡೀ ನಗರ ಕೇಸರೀಕರಣಗೊಂಡಿದೆ. ಎಲ್ಲೆಡೆ ಬಿಜೆಪಿ, ಮೋದಿ ಬ್ಯಾನರ್ , ಕಟೌಟ್ ಗಳು ರಾರಾಜಿಸುತ್ತಿವೆ.

ಆದರೆ, ಬಿಜೆಪಿ ಬ್ಯಾನರ್ ಗಳ ಮದ್ಯೆಯೇ ಅಲ್ಲಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿರುವ ರಾಜ್ಯ ಸರ್ಕಾರದ ಜಾಹೀರಾತು ಫಲಕವೊಂದು ಕಾಣಿಸುತ್ತಿದೆ. ಹೌದು, ನಿನ್ನೆ ರಾತ್ರೋರಾತ್ರಿ ತಲೆ ಎತ್ತಿದ ಜಾಹೀರಾತು ಫಲಕದಲ್ಲಿ ದೇಶದ ನಂಬರ್ ಒನ್ ರಾಜ್ಯ ಕರ್ನಾಟಕಕ್ಕೆ ಸ್ವಾಗತ ಎಂದು ಕೋರಲಾಗಿದೆ. ಇದು ಎಲ್ಲರ ಗಮನ ಸೆಳೆಯುತ್ತಿದ್ದು ಸಿಎಂ ಸಿದ್ಧರಾಮಯ್ಯ ಅವರು ಈ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

Related Articles

Leave a Reply

Your email address will not be published. Required fields are marked *

Back to top button