ಪ್ರಮುಖ ಸುದ್ದಿ

BAD NEWS- ನಗರದ ಸುಪರಿಚಿತ ಕಿರಣ್ ಹೇರುಂಡಿ ಇನ್ನಿಲ್ಲ.!

ಸ್ನೇಹ ವರ್ಗಕ್ಕೆ ಬರಸಿಡಿಲಿನಂತೆ ಬಡಿದ ಕಿರಣ್ ಸಾವಿನ ಸುದ್ದಿ 

ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಗಾಂಧಿಚೌಕ ನಿವಾಸಿ ಕಿರಣ್ ತಂದೆ ವಿರೂಪಾಕ್ಷಪ್ಪಗೌಡ ಹೇರುಂಡಿ (36) ಗುರುವಾರ ಹೃದಯಘಾತದಿಂದ ನಿಧನ ಹೊಂದಿದರು ಎಂದು ತಿಳಿಸಲು ವಿಷಾಧಿಸುತ್ತೇವೆ.

ಮೃತರು ಪುತ್ರ ಮತ್ತು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ನಗರದ ಅವರ ಸ್ವಂತ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆಕಸ್ಮಿಕವಾಗಿ ಹೃದಯಾಘಾತವಾಗಿದ್ದು, ಕೂಡಲೇ ಕಲಬುರ್ಗಿಯ ಆಸ್ಪತ್ರೆಗೆ ದಾಖಲಿಸಲು ಹೋದ ವೇಳೆಗಾಗಲೇ ಕಿರಣ್ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. ಅಪಾರ ಸ್ನೇಹ ಬಳಗ ಹೊಂದಿದ್ದ ಕಿರಣ ಇನ್ನಿಲ್ಲ ಎಂಬ ಸುದ್ದಿ ತಿಳಿದು ಮನೆ ಮುಂದೆ ಅಪಾರ ಬಂಧು ಬಳಗ, ಸ್ನೇಹಿತರು ಜಮಾವಣೆಗೊಂಡಿದ್ದಾರೆ. ಕಿರಣ್ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಮನೆ ಮುಂದೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.

 

Related Articles

Leave a Reply

Your email address will not be published. Required fields are marked *

Back to top button