ಕಾಂಗ್ರೆಸ್ನಿಂದಲೇ ಸ್ಪರ್ಧೆ ಖಚಿತಃ ಡಾ.ಮಾಲಕರಡ್ಡಿ U ಟರ್ನ್
ಯಾದಗಿರಿಃ ಮತ್ತೆ ಯಾದಗಿರಿ ಮತ ಕ್ಷೇತ್ರದಿಂದಲೇ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ರಾಜಕೀಯದಿಂದ ನಿವೃತ್ತಿ ಪಡೆಯುವದಾಗಿ ಘೋಷಿಸಿ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಡಾ.ಮಾಲಕರಡ್ಡಿ, ಶನಿವಾರ ಜಿಲ್ಲೆಯ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದ ಕೊಂಗಂಡಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಂಗಂಡಿ ಏತ ನೀರಾವರಿ ರೈತರ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಇದರಿಂದ ಈ ಭಾಗದ ರೈತಾಪಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಹಿರಿಯ ಶಾಸಕರನ್ನು ಅಗೌರವದಿಂದ ಕಂಡಿದ್ದು, ಅವರ ಮಾರ್ಗದರ್ಶನ ಪಡೆಯದೆ ಸರ್ಕಾರ ನಡೆಸುತ್ತಿರುವದರಿಂದ ಅಸಮಾಧಾನವಿದೆ ಎಂದ ಅವರು, ಆದರೆ ಮುಖ್ಯಮಂತ್ರಿಯವರು, ರಾಜ್ಯದ ಅಭಿವೃದ್ಧಿಗೆ ಅವಿರತ ಶ್ರಮವಿದೆ.
ಹಸಿವು ಮುಕ್ತ ಕರ್ನಾಟಕ ಸೇರಿದಂತೆ ಜನಪರ ಯೋಜನೆಗಳನ್ನು ಕೈಗೊಂಡಿದ್ದಾರೆ ಎಂದ ಅವರು, ಬರುವ 2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ನಿಂದಲೇ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ಜಿಲ್ಲೆಯಲ್ಲಿ ನಡೆದ ತೆರೆ ಮರೆ ರಾಜಕೀಯಕ್ಕೆ ತೆರೆ ಎಳೆದರು. 82 ರ ಎಳೆ ವಯಸ್ಸಿನಲ್ಲೂ ಬತ್ತದ ರಾಜಕೀಯ ಉತ್ಸಾಹ, ಸಾಮಾಜಿಕ ಸೇವೆ, ಅಭಿವೃದ್ಧಿ ಮಂತ್ರ, ಜನಪರ ಕಾಳಜಿ ಇವರಲ್ಲಿ ಕಾಣಬಹುದು.