ಪ್ರಮುಖ ಸುದ್ದಿ
BAD NEWS- ಮಲ್ಲಮ್ಮ /ಗೋವಿಂದಪ್ಪ ಕಟ್ಟಿಮನಿ ನಿಧನ
ಕಟ್ಟಿಮನಿ ಕುಟುಂಬದ ಸ್ಪೂರ್ತಿಯ ಚಿಲುಮೆ ಮಲ್ಲಮ್ಮ ಅಸ್ತಂಗತ
ಶಹಾಪುರಃ ಪಟ್ಟಣದ ಗಂಗಾ ನಗರ ನಿವಾಸಿ ದಿವಂಗತ ಗೋವಿಂದಪ್ಪ ಕಟ್ಟಿಮನಿ ಅವರ ಧರ್ಮಪತ್ನಿ ಮಲ್ಲಮ್ಮ ಕಟ್ಟಿಮನಿ (75) ಬುಧವಾರ ರಾತ್ರಿ ನಿಧನರಾದರು.
ಮೃತರು ಮೂವರು ಗಂಡು ಆರು ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ದಿ.ಗೋವಿಂದಪ್ಪ ಕಟ್ಟಿಮನಿ ತಾಲೂಕಿನಲ್ಲಿ ಸುಪರಿಚಿತರು, ಅಲ್ಲದೆ ನಗರದ ಪ್ರತಿಷ್ಠಿತ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕಿನ ಸಂಸ್ಥಾಪಕ ಸದಸ್ಯರು, ಉಪಾಧ್ಯಕ್ಷರು ಮತ್ತು ಪುರಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಗೋವಿಂದಪ್ಪ ಕಟ್ಟಿಮನಿ ಅವರ ಸಾಮಾಜಿಕ ಕಾರ್ಯಚಟುವಟಿಕೆಗೆ ಸದಾ ಸ್ಪೂರ್ತಿಯ ಚಿಲುಮೆಯಾಗಿದ್ದ ಶ್ರೀಮತಿ ಮಲ್ಲಮ್ಮ ಕಟ್ಟಿಮನಿಯವರು ಬುಧವಾರ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೂ ಅಷ್ಟೆ ಅಚ್ಚುಮೆಚ್ಚಳಾಗಿ ಕುಟುಂಬದ ದೊಡ್ಡ ಜವಬ್ದಾರಿಯನ್ನು ನಿಭಾಯಿಸಿದ್ದ ಮಲ್ಲಮ್ಮ ಇನ್ನಿಲ್ಲ ಎಂದು ತಿಳಿಸಲು ವಿಷಾಧಿಸುತ್ತೇವೆ.
ನಗರದ ಬಸ್ ಡಿಪೋ ಹಿಂಬದಿ ಬರುವ ರುದ್ರಭೂಮಿಯಲ್ಲಿ ಗುರುವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.