ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಮಾಲಕರಡ್ಡಿ ಚಾಲನೆ
ಯಾದಗಿರಿಃ ಕ್ಷೇತ್ರದಾದ್ಯಂತ ವಿವಿದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹುರಸಗುಂಡಗಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ನಾಗರಿಕರು ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಕಾಳಜಿವಹಿಸಬೇಕು ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ತಿಳಿಸಿದರು.
ಯಾದಗಿರಿ ಮತಕ್ಷೇತ್ರ ವ್ಯಾಪ್ತಿ ಬರುವ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮದ ವಿವಿಧ ಬಡಾವಣೆಗಳಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ 5.70 ಕೋಟಿ, ಸನ್ನತಿ ಬ್ರೀಜ್ ಕಂ ಬ್ಯಾರೇಜ್ ನಿಂದ ಹೊಸ ಗ್ರಾಮದವರೆಗೆ ಕುಡಿಯುವ ನೀರು ಸರಬರಾಜು ಕಾಮಗಾರಿಗೆ 3.54 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ.
ಮತ್ತು ಪುನರ್ವಸತಿ ಗ್ರಾಮದಲ್ಲಿ ಸಾರ್ವತ್ರಿಕ ಸಮುದಾಯ ಭವನ ನಿರ್ಮಾಣಕ್ಕೆ 54 ಲಕ್ಷ ರೂ. ಅಂಗನವಾಡಿ ಕಟ್ಟಡ ಕಾಮಗಾರಿಗೆ 15 ಲಕ್ಷ ರೂ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 10 ಲಕ್ಷ.ರೂ. ಅನುದಾನ ಕಲ್ಪಿಸಲಾಗಿದೆ. ನಾಗರಿಕರು ಈ ಎಲ್ಲಾ ಕಾಮಗಾರಿಗಳ ಕಾಳಜಿವಹಿಸಿ ನಿರ್ಮಿಸಿಕೊಳ್ಳುವಲ್ಲಿ ಮುತುವರ್ಜಿವಹಿಸಬೇಕು. ನಾಗರಿಕರ ಜೀವನಕ್ಕೆ ಈ ಎಲ್ಲಾ ಕಾಮಗಾರಿಗಳು ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯೆ ಸಿದ್ದಮ್ಮ ದೇವಿಂದ್ರಪ್ಪ ಯಾದಗಿರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಕೆ.ಟಕ್ಕಳಕಿ, ಸಿಪಿಐ ಸಿರಾಜುದ್ದೀನ್, ಎಇಇ ರಾಜಕುಮಾರ ಪತ್ತಾರ, ಸಹಾಯಕ ಇಂಜಿನಿಯರ್ ಸೂಗರಡ್ಡಿ ಪಾಟೀಲ್, ವೆಂಕಟರಡ್ಡಿ ಪಾಟೀಲ, ವಿಶ್ವನಾಥರಡ್ಡಿ ಪಾಟೀಲ್, ಆರ್.ಧನಂಜಯ, ಸಂಗಣ್ಣ ಸಜ್ಜನ್, ನಿಜಗುಣ ದೋರನಳ್ಳಿ, ವೀರಣ್ಣ ವಿಶ್ವಕರ್ಮ, ಪರಮೇಶ ನಾಯ್ಕಲ್, ಶರಣಬಸ್ಸಪ್ಪ ಕವಲ್ದಾರ, ಮರೆಪ್ಪ ನಾಲ್ವಾರ, ಉಸ್ಮಾನ್ ಬಾಷಾ ಹಲಕರ್ಟಿ ಸೇರಿದಂತೆ ಸ್ಥಳೀಯ ಗ್ರಾಪಂ ಅಧ್ಯಕ್ಷ ಸರ್ವ ಸದಸ್ಯರು ಉಪಸ್ಥಿತರಿದ್ದರು.