ಪ್ರಮುಖ ಸುದ್ದಿ
UP ಉಪಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲುಃ CM ಸಿದ್ರಾಮಯ್ಯ
UP ಉಪಚುನಾವಣೆಯಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆಃ CM ಸಿದ್ರಾಮಯ್ಯ
ಚಿತ್ರದುರ್ಗಃ ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಬಿಜೆಪಿಯವರ ಹಿಂದುತ್ವ ಭಾಷಣ ನಡೆಯಲ್ಲಿ ಎಂದು ಸಿಎಂ ಸಿದ್ರಾಮಯ್ಯ ತಿಳಿಸಿದರು.
ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ ಅವರು, ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಮತ್ತು ಉಪ ಮುಖ್ಯಮಂತ್ರಿ ಅವರ ತವರು ಕ್ಷೇತ್ರದಲ್ಲಿಯೇ ಹೀನಾಯ ಸೋಲು ಅನುಭವಿಸಿದ್ದಾರೆ.
ತಮ್ಮ ಸ್ವಕ್ಷೇತ್ರವನ್ನು ಗೆಲ್ಲಲಾಗದ ಅಲ್ಲಿನ ಸಿಎಂ ಯೋಗಿ, ಕ್ರನಾಟಕಕ್ಕೆ ಬಂದು ಹಿಂದುತ್ವ ಭಾಷಣ ಮಾಡಿದರೆ ಯಾವುದೆ ಫಲ ನೀಡಲ್ಲ ಎಂದು ಕುಟುಕಿದರು.
ಕರ್ನಾಟಕದಲ್ಲಿ ಅವರ ಹಿಂದುತ್ವ ಆಟ ನಡೆಯಲ್ಲ.
ಇಲ್ಲಿನ ಪ್ರಬುದ್ಧರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.