ಪ್ರಮುಖ ಸುದ್ದಿ
1 ವರ್ಷ ನನ್ನನ್ನು ಟಚ್ ಮಾಡಲು ಸಾಧ್ಯವಿಲ್ಲ-ಸಿಎಂ ಕುಮಾರಸ್ವಾಮಿ
ಪ್ರಕೃತಿ ನನ್ನ ಪರವಿದೆ -ಸಿಎಂ ಕುಮಾರಸ್ವಾಮಿ
ಬೆಂಗಳೂರಃ ಇನ್ನು ಒಂದು ವರ್ಷದವರೆಗೆ ನನ್ನನ್ನು ಟಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ನಗರದಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆವರೆಗೆ ನಾನೇ ಸಿಎಂ ಆಗಿರ್ತಿನಿ ಯಾರು ಏನು ಮಾಡಕ್ಕಾಗಲ್ಲ. ರಾಜ್ಯದಲ್ಲಿ ಉತ್ತಮ ಮಳೆಯಾಗ್ತಿದೆ ಪ್ರಕೃತಿ ನನ್ನಪರವಾಗಿದೆ ಎಂದರು.
ಮೈತ್ರಿ ಸರ್ಕಾರ ರಚನೆಯಿಂದ ಇಲ್ಲಿವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಹಲವರಿಗೆ ಸಚಿವ ಸ್ಥಾನ ದೊರೆಯದ ಕಾರಣ ಸಾಕಷ್ಟು ದೊಂಬರಾಟಗಳು ನಡೆಯುತ್ತಿವೆ.
ಅಲ್ಲದೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಶಾಸಕ ಎಂ.ಬಿ.ಪಾಟೀಲ್ ತಮಗೆ ಸಚಿವ ಸ್ಥಾನ ದೊರೆಯದ ಕಾರಣ, ಪಕ್ಷದ ಮುಖಂಡರ ಮೇಲೆ ಮುನಿಸಿಕೊಂಡಿದ್ದು, ತಮ್ಮ ಜೊತೆ 20 ಜನ ಶಾಸಕರಿದ್ದಾರೆ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಗುಡುಗಿದ್ದರು.
ಈ ಎಲ್ಲಾ ಕಾರಣಗಳಿಂದಾಗಿ ಮೈತ್ರಿ ಸರಕಾರ ಮುಂದುವರೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರು ಈ ರೀತಿ ಹೇಳಿಕೆ ನೀಡಿರಬಹುದು ಎನ್ನಲಾಗಿದೆ.