ಪ್ರಮುಖ ಸುದ್ದಿ

ಧರಂಸಿಂಗ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ‌ ಸಿಎಂ ಹೆಚ್ ಡಿಕೆ ಪ್ರಾಯಶ್ಚಿತ್ತ!

ಬೆಂಗಳೂರು: ಮಾಜಿ ಸಿಎಂ, ದಿವಂಗತ ಧರಂಸಿಂಗ್ ಅವರ ಕಾಲದಲ್ಲಿ ನಾನು ಶಾಸಕನಾಗಿದ್ದೆ. ಅನಿವಾರ್ಯ ಕಾರಣದಿಂದ ನಾನು ಅವರಿಗೆ ಮನಸ್ಸು ನೋಯಿಸುವ ಸ್ಥಿತಿ ಬಂತು. ಆದರೆ, ಅಂದು  ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಬಳಿ ಧರಂಸಿಂಗ್ ಅವರನ್ನು ಭೇಟಿ ಮಾಡಿದ್ದೆ. ಅವರು ರಾಜಕೀಯದಲ್ಲಿ ಇದೆಲ್ಲಾ‌ ಸಹಜವೆಂದುಕೊಂಡು ಕ್ಷಮಿಸಿದ್ದರು ಎಂದು ಹೇಳುವ ಮೂಲಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಾಯಶ್ಚಿತ್ತದ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಆಯೋಜಿಸಲಾಗಿದ್ದ ಧರಂಸಿಂಗ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಧರಂಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉರುಳಿಸಿ ಬಿಜೆಪಿ-ಜೆಡಿಎಸ್ ಸರ್ಕಾರ ರಚಿಸಿದ್ದನ್ನು ನೆನಪಿಸಿಕೊಂಡು ಆತ್ಮಾವಲೋಕನದ ಮಾತುಗಳನ್ನಾಡಿದರು.

Related Articles

Leave a Reply

Your email address will not be published. Required fields are marked *

Back to top button