ಪ್ರಮುಖ ಸುದ್ದಿ

ಬುದ್ಧ ಮಂದಿರದಲ್ಲೇ ನಡೆಯಿತಾ ಮೌಢ್ಯಾಚರಣೆ : ಸಾಮಾಜಿಕ ಜಾಲತಾಣದಲ್ಲಿ ಟೀಕೆ!

ಕಲಬುರಗಿ : ನಗರದ ಬುದ್ಧ ಮಂದಿರದಲ್ಲಿ ಮೌಢ್ಯಾಚರಣೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ನಿನ್ನೆ ರಕ್ತ ಚಂದ್ರಗ್ರಹಣ ಗೋಚರಿಸುವ ಕಾರಣ ಮಂದಿರದೊಳಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಮಂದಿರದ ಗೇಟ್‌ನಲ್ಲಿ ಈ ಕುರಿತ ಫಲಕವನ್ನೂ ಹಾಕಲಾಗಿತ್ತು ಎನ್ನಲಾಗಿದೆ. ಖಗ್ರಾಸ ಚಂದ್ರಗ್ರಹಣ ಇರುವುದರಿಂದ ಮಂದಿರದೊಳಗೆ 4 ಗಂಟೆ ಬಳಿಕ ಪ್ರವೇಶ ನಿಷೇಧಿಸಲಾಗಿದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಲಾಗಿತ್ತು.

ಬುದ್ಧ ಮಂದಿರಕ್ಕೆ ಬಂದ ಕೆಲವರನ್ನು ಗೇಟ್‌ ಬಳಿಯೇ ಕೂರಿಸಲಾಗಿತ್ತಂತೆ. ಫೇಸ್‌ಬುಕ್‌ನಲ್ಲಿ ಈ ಕುರಿತ ಪೋಸ್ಟ್‌ವೊಂದು ಹರಿದಾಡುತ್ತಿದೆ. ಈ ಬಗ್ಗೆ ಅನೇಕರು ಕಟುವಾಗಿ ಟೀಕಿಸಿ ಕಮೆಂಟ್ ಮಾಡಿದ್ದಾರೆ.
ಗೌತಮ ಬುದ್ಧ ಮೌಢ್ಯ ವಿರೋಧಿ ಸಿದ್ಧಾಂತವನ್ನು ಪ್ರತಿಪಾದಿಸಿದವರಹ. ಆದರೆ, ಆತನ ಅನುಯಾಯಿಗಳು ಮೌಢ್ಯಕ್ಕೆ ಕಟ್ಟುಬಿದ್ದಿರುವುದು ದುರಂತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬಗ್ಗೆ ಬುದ್ಧ ಮಂದಿರದ ಮುಖ್ಯಸ್ಥರು ಸ್ಪಷ್ಟನೆ ನೀಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button