ಪ್ರಮುಖ ಸುದ್ದಿ
ಸಚಿವರ ಮೀರಸಾದಿಕ್ ವರ್ತನೆಃ ಶಾಮನೂರ ಆಕ್ರೋಶ
ಕಲಬುರಗಿಃ ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆ ಈಡೇರಿಕೆಗಾಗಿ ಕೆಲ ಸಚಿವರು ಮೀರಸಾದಿಕ್ ನಂತೆ ಕೆಲಸ ಮಾಡುತ್ತಿದ್ದಾರೆ ಇದು ಒಳ್ಳೆಯದಲ್ಲ ಎಂದು ವೀರಶೈವ ಮಹಾ ಸಭಾ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರ ಶಿವಶಂಕರಪ್ಪ ಹರಿಹಾಯ್ದರು.
ಕಲಬುರ್ಗಿ ಜಿಲ್ಲೆಯ ಆಳಂದನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ಬೇಡುವವರು ಹೋಗಲಿ ಉಳಿದವರಿಗೆ ಯಾಕೆ ಬಲವಂತ ಮಾಡೋದು. ಪ್ರತ್ಯೇಕ ಧರ್ಮದ ಬೇಡಿಕೆಗೆ ಸಂಬಂಧಿಸಿದಂತೆ ಸಭೆ ಕರೆದರೆ ಬಾರದ ಸಚಿವರು ಹೊರಗಡೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ.
ಸಚಿವ ಸ್ಥಾನ ಶಾಶ್ವತವಲ್ಲ ಎಂಬುದು ತಿಳಿದಿರಲಿ. ಸಚಿವ ಸ್ಥಾನ ಹೋದ ಮರುದಿನವೇ ಯಾರು ಕೇಳುವದಿಲ್ಲ. ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.