ಶಹಾಪುರದಲ್ಲಿ ಮಳೆ ಅಬ್ಬರ- ಕೃಷಿ ಕಚೇರಿ, ಮನೆಗಳಿಗೆ ನುಗ್ಗಿದ ನೀರು
ಮನೆಗೆ ನುಗ್ಗಿದ ನೀರು ಪರದಾಡಿದ ಕುಟುಂಬ
ಶಹಾಪುರಃ ಶುಕ್ರವಾರ ಸಂಜೆ ನಗರದಲ್ಲಿ ಭಾರಿ ಮಳೆ ಸುರಿದ ಪರಿಣಾಮ ನಗರದ ಬಸವೇಶ್ವರ ವೃತ್ತ ಮತ್ತು ಪೊಲೀಸ್ ಠಾಣೆ ಮತ್ತು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ್ದು ಕುಟುಂಬಸ್ಥರು ಪರದಾಡಿದರು.
ಅಲ್ಲದೆ ನಗರ ಯಾದಗಿರಿ ರಸ್ತೆಗೆ ಹೊಂದಿಕೊಂಡಿದ್ದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯೊಳಗೂ ನೀರು ನುಗ್ಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ನೀರಿನಲ್ಲಿಯೇ ನಡೆದು ಬರುವಂತಾಯಿತು.
ಸುಮಾರು ಒಂದು ತಾಸು ಮಳೆ ಸುರಿದಿದ್ದು, ಬಸವೇಶ್ವರ ವೃತ್ತ ಸೇರಿದಂತೆ ಮಾರುತಿ ರಸ್ತೆ ಸಂಪೂರ್ಣ ನೀರಲ್ಲಿ ಮುಳುಗಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಶಾಲಾ ಮಕ್ಕಳು, ವೃದ್ಧರು ಮಳೆ ನಿಂತ ಮೇಲೂ ಮನೆಗೆ ತೆರಳಲು ಹರಸಾಹಸ ಪಟ್ಟರು.
ನಗರದಲ್ಲಿ ಎಸ್ಎಫ್ಸಿ ಅನುದಾನ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ಅಸಮರ್ಪಕ ಚರಂಡಿ ನಿರ್ಮಾಣದಿಂದ ಮಳೆಯಾದಾಗೊಮ್ಮೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತವಾಗಿದೆ.
ಲಕ್ಷ್ಮೀ ನಗರ. ಪೊಲೀಸ್ ಠಾಣೆ ಅಕ್ಕಪಕ್ಕದ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿವೆ ಸೇರಿದಂತೆ ಹಲವಡೆ ನೀರು ಅಧಿಕ ಮಟ್ಟದಿ ಹರಿದಿದ್ದು, ದೇವಿ ನಗರದ ಹಲವು ಮನೆಗಳಿಗೆ ನೀರು ನುಗ್ಗಿವೆ. ಕುಟಂಬಸ್ಥರು ನೀರು ಹೊರಹಾಕಲು ಪರದಾಡಿದ ದೃಶ್ಯಗಳು ಕಂಡು ಬಂದವು.