ಪ್ರಮುಖ ಸುದ್ದಿ

ಭೀಮಾತೀರದಲ್ಲಿ ಜೋಡಿ ಕೊಲೆ : ಪೊಲೀಸರ ನಿದ್ದೆ ಗಾಯಬ್!

ವಿಜಯಪುರ: ನಗರದ ನವರತ್ನ ಹೋಟೆಲ್ ಬಳಿ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಗೋಲಗುಮ್ಮಟ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಇಬ್ಬರನ್ನು ಹತ್ಯೆ ನಡೆಸಿದೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆನ್ನಲಾಗಿದೆ.

ಮತ್ತೊಂದು ಕಡೆ ಪೊಲೀಸರಿಗೆ ಈವರೆಗೂ ಹತ್ಯೆ ಆಗಿರುವವರ ಗುರುತು ಸಹ ಪತ್ತೆ ಆಗಿಲ್ಲ. ಹತ್ಯೆ ಆದವರೂ ಸಹ ಬೇರೆ ಊರಿನವರಾಗಿದ್ದಾರೆ ಎನ್ನಲಾಗುತ್ತಿದೆ. ರಾತ್ರಿ ವೇಳೆ ಈ ಕೃತ್ಯ ನಡೆದಿದ್ದು ಒಂದು ಕಡೆ ಹತ್ಯೆಯಾದವರೂ ಅಪರಿಚಿತರು ಮತ್ತೊಂದು ಕಡರ ಹತ್ಯೆಗೈದು ಎಸ್ಕೇಪ್ ಆದವರೂ ಅಪರಿಚಿತರಾಗಿದ್ದು ಪೊಲೀಸರ ನಿದ್ದೆಗೆಡಿಸಿದೆ.

ನಗರದ ಹೋಟೆಲ್ ಬಳಿಯೇ ಜೋಡಿ ಹತ್ಯೆ ನಡೆದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ, ಪೊಲೀಸರು ಈ ನಿಗೂಢ ಹತ್ಯೆಯ ಪ್ರಕರಣ ಬೇಧಿಸಲು ಜಾಲ ಬೀಸಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button