ಪ್ರಮುಖ ಸುದ್ದಿ
ಕಲಬುರ್ಗಿಃಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ಬಾಲಕಿ ಸಾವು
ಕಲಬುರ್ಗಿಃಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ಬಾಲಕಿ ಸಾವು
ಕಲಬುರ್ಗಿಃ ಜಮೀನೊಂದರಲ್ಲಿ ಕಾಲುಜಾರಿ ಹೊಂಡದಲ್ಲಿ ಬಿದ್ದು ಬಾಲಕಿಯೊರ್ವಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಸೇರಿ ತಾಂಡದಲ್ಲಿ ನಡೆದಿದೆ.
ಸೀಮಾ ಚವ್ಹಾಣ(9) ಎಂಬ ಬಾಲಕಿಯೇ ಮೃತ ದುರ್ದೈವಿ.
ತಾಯಿ ಜೊತೆಗೆ ಜಮೀನಿಗೆ ಹೋದಾಗ ಆಟ ಆಡುತ್ತಾ ಜಮೀನಿನಲ್ಲಿದ್ದ ಹೊಂಡಕ್ಕೆಬಾಲಕಿ ಸೀಮಾ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆ. ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಶಾಸಕ ಉಮೇಶ್ ಜಾದವ್ ಭೇಟಿ ನೀಡಿ, ಬಾಲಕಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ.




