ಕಾವ್ಯ
“ಮಾರ್ಗದಾಳು” ಮಲ್ಲಿಕಾರ್ಜುನ ಮುದನೂರ ಬರೆದ ಕವಿತೆ
“ಮಾರ್ಗದಾಳು”
ತನ್ನೆಲ್ಲಾ ನೋವುಗಳನ್ನು
ನುಂಗಿ,
ಮಗುವಿನ ಕೀಟಲೆಗಳನ್ನು
ಸಹಿಸಿ,
ತಾಯಿ ಮಗುವಿಗೆ
ಹಾಲುಣಿಸುವ ಹಾಗೇ,
ಸ್ನೇಹಿತರ ನೋವು
ನಲಿವುಗಳಿಗೆ ಸ್ಪಂಧಿಸಿ
ಅವರ ಅಭ್ಯುದಯಕ್ಕೆ
ದಾರಿ ತೋರುವ
ಮಾರ್ಗದಾಳು
ನಾನು.
ಆದರೆ,
ನನ್ನೆಲ್ಲಾ ಕಷ್ಟಗಳನ್ನು
ಮರೆಯಲು, ಪರಿಹರಿಸಲು
ದೂರದ ಅಪರಿಚಿತ
ಹೂವಿನ ಸುಗಂಧ
ಸುವಾಸನೆಯು
ಮನಸ್ಸಿಗೆ,
ಆಹ್ಲಾದಕರ ಹಿತ,
ನೆಮ್ಮದಿ, ಸಮಾಧಾನ
ಪರಿಹಾರ ತಂದಿತು
ಇದು
ಫಲಾಪೇಕ್ಷವಿಲ್ಲದ
ನಿಷ್ಕಲ್ಮಶವಾದ ಸಹಕಾರಕ್ಕೆ
ಸಾಕ್ಷಾತ್ಕಾರದ ಅನುಭವ.
*ಮಲ್ಲಿಕಾರ್ಜುನ ಮುದನೂರ.





