ಟ್ರಾಕ್ಟರ್ ಡಿಕ್ಕಿ ಬಾಲಕ ಸಾವುಃ ಗ್ರಾಮಸ್ಥರು ಕಂಡಿರದ ಘೋರ ದುರಂತ ಪಾಲಕರ ಆಕ್ರಂದನ
ಶಹಾಪುರಃ ಟ್ರಾಕ್ಟರ್ ಡಿಕ್ಕಿ ಬಾಲಕ ಸಾವು
ಯಾದಗಿರಿಃ ವಾಯುವಿಹಾರಕ್ಕೆ ತೆರಳಿದ್ದ ಬಾಲಕನಿಗೆ ಟ್ರಾಕ್ಟರವೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ (ಜೆ) ಗ್ರಾಮದಲ್ಲಿ ನಡೆದಿದೆ.
ವೆಂಕಟೇಶ(14) ಮೃತ ಬಾಲಕನಾಗಿದ್ದು, ಹುಲಕಲ್ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ಗುರುತಿಸಲಾಗಿದೆ. ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತಕ್ಕೆ ಒಳಗಾದ ಬಾಲಕನ ಶವ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸಾರ್ವಜನಿಕರು ಶವ ನೋಡದಷ್ಟು ಘೋರವಾಗಿದೆ. ಪಾಲಕರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಬಾಲಕನ ಶವ ಕಂಡ ಪ್ರತಿಯೊಬ್ಬರು ಗಾಬರಿ ವ್ಯಕ್ತಪಡಿಸುತಿದ್ದು, ಏನು ತಿಳಿಯದ ಬಾಲಕನಿಗೆ ಇಂಥಹ ಘೋರ ಮರಣದ ಶಿಕ್ಷೆ ಏತಕೆ ದೇವ ಎಂದು ವಿಷಾಧ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರು ರಕ್ತಸಿಕ್ತ ಚಲ್ಲಾಪಿಲ್ಲಿಯಾದ ಶವ ಕಂಡು ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಸುಧಾರಿಸಲು ನಾಗರಿಕರು ಹೆಣಗಾಡುತಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.
ಘಟನೆ ಕುರಿತು ವಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.