ಪ್ರಮುಖ ಸುದ್ದಿ
ಹೈಕಮಾಂಡ್ ಮುಂದೆ ಆಂತರಿಕ ಸಮಸ್ಯೆ ಹೇಳೋಕೆ ಹೋಗ್ತಿವಿ – ಸಿ.ಪಿ.ಯೋಗೇಶ್ವರ
ಡಿಕೆಶಿ ನಾನು ರಾಜಕೀಯ ವೈರಿಗಳು – ಸಿಪಿವೈ
ವಿವಿ ಡೆಸ್ಕ್ಃ ನಾವು ದೆಹಲಿಗೆ ಹೋಗುತ್ತೇವೆ ಹೋಗಿದ್ದೇವೆ ನಿಜ. ಹೈಕಮಾಂಡ್ ಮುಂದೆ ನಮ್ಮ ಆಂತರಿಕ ಸಮಸ್ಯೆ ಹೇಳಿಕೊಳ್ಳಲು ಹೋಗುತ್ತೇವೆ. ಯಡಿಯೂರಪ್ಪನವರ ಮುಂದೆ ನನ್ನ ಟಾರ್ಗೆಟ್ ಮಾಡಬೇಡಿ ಎಂದು ಬಿಜೆಪಿಯ ಸಿ.ಪಿ.ಯೋಗೇಶ್ವರ ಹೇಳಿಕೆ ನೀಡುವ ಮೂಲಕ ಸಿಎಂ ಬದಲಾವಣೆ ಬಗ್ಗೆ ಯೂ ಟರ್ನ್ ಹೊಡೆದಿದ್ದಾರೆ ಎನ್ನಬಹುದು.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಈ ಮೇಲಿನಂತೆ ಮಾತನಾಡಿದ್ದಾರೆ. ಅಲ್ಲದೆ ಡಿಕೆಶಿ ನಾನು ರಾಜಕೀಯ ವೈರಿಗಳು ಅದರಲ್ಲೇನಿದೆ. ದೆಹಲಿಗೆ ಹೊರಟಿದ್ದೇನೆ ಎಂದರೆ, ಶುರು ಊಹಾಪೋಹ ನಮ್ಮ ಸಮಸ್ಯೆಳನ್ನ ನಮ್ಮ ಪಕ್ಷದ ಹೈಕಮಾಂಡ್ ಮುಂದೆ ಇಡಲು ಹೋಗುತ್ತೇವೆ. ಹಾಗಂತ ಸಿಎಂ ವಿರುದ್ಧ ಎತ್ತಿಕಟ್ಟುವದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.