ಪ್ರಮುಖ ಸುದ್ದಿ
ಡಿಕೆಶಿ ಮಾತು ಡಿಕೆಶಿಗೆ ತಿಳಿಯಲ್ಲ -ಸಿಪಿ ಯೋಗೇಶ ವ್ಯಂಗ್ಯ
ಡಿಕೆಶಿ ವಾಗ್ದಾಳಿಗೆ ಯೋಗೇಶ ತಿರುಗೇಟು
ಚನ್ನಪಟ್ಟಣಃ ಸಚಿವ ಡಿಕೆಶಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರ ವಿರುದ್ಧ ಷಡ್ಯಂತ್ರ ರೂಪಿಸಿದ್ರು , ಈಗ ನೋಡಿದ್ರೆ ನಾನು ಸಿದ್ರಾಮಯ್ಯನವರಿಗೆ ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಅನ್ಯಾಯ ಮಾಡಿರುವಂತೆ ಭಾವವೇಶದಿಂದ ಮಾತನಾಡುತ್ತಿದ್ದಾರೆ ಅವನೇನು ಮಾತನಾಡುತ್ತಾನೋ ಅವನಿಗೆ ತಿಳಿಯಲ್ಲ ..ಎಂದು ಸಿಪಿ ಯೋಗೇಶ್ವರ ಏಕವಚನದಲ್ಲಿಯೇ ಡಿಕೇಶಿಗೆ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮದವರಿಗೆ ಮಾತನಾಡಿದ ಅವರು, ಡಿಕೆಶಿ ಯವರ ಆಟ ನಡೆಯಲು ಇದು ಕನಕಪುರವಲ್ಲ. ನನ್ನ ಚನ್ನಪಟ್ಟಣದಲ್ಲಿ ಅವರ ಆಟ ನಡೆಸಲು ಬಿಡುವದಿಲ್ಲ ಎಂದು ಗುಡುಗಿದರು.