ಪ್ರಮುಖ ಸುದ್ದಿ

ಹಾಡುಹಗಲೇ ಜಿಪಂ ವಿಪಕ್ಷ ನಾಯಕನ ಮೇಲೆ ಮಾರಣಾಂತಿಕ ಹಲ್ಲೆ

ಯಾದಗಿರಿಃ ದುಷ್ಕರ್ಮಿಗಳು ಹಾಡುಹಗಲೇ ಜಿಪಂ ವಿಪಕ್ಷ ನಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಬೆಳಗ್ಗೆ ನಗರದ ಎಸ್.ಪಿ. ಕಚೇರಿ ಸಮೀಪ ಚಿತಾಪುರ ರಸ್ತೆಯಲ್ಲಿ ನಡೆದಿದೆ.

ಸುರಪುರ ತಾಲೂಕಿನ ಬಿಜೆಪಿ ಮುಖಂಡ, ಜಿಪಂ‌ ಸದಸ್ಯ ಹಾಗೂ‌ ಶಾಸಕ ರಾಜುಗೌಡ ಅವರ ಆಪ್ತನಾಗಿದ್ದ ಮರಿಲಿಂಗಪ್ಪ ಕರ್ನಾಳ ಎಂಬುವರ ಮೇಲೆಯೇ ದುಷ್ಕರ್ಮಿಗಳು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಲ್ಲಲುಯತ್ನಿಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ಚೀರಾಡುತ್ತಾ ಸಾರ್ವಜನಿಕರಡೆ ಓಡುತ್ತಿದ್ದಂತೆ ದುಷ್ಕರ್ಮಿಗಳು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ನಗರದ‌ ಜನರು ಆತಂಕಗೊಂಡಿದ್ದು, ಹಲ್ಲೆಗೊಳಗಾದ ವ್ಯಕ್ತಿ ರಕ್ತಸಿಕ್ತ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿರುವ ವಿಷಯ ಪೊಲೀಸರಿಗೆ ತಿಳಿದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಹೆಚ್ವಿನ‌ ಚಿಕಿತ್ಸೆಗಾಗಿ ರಾಯಚೂರ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button