ಪ್ರಮುಖ ಸುದ್ದಿ
ಜಾಲಿಬೆಂಚಿಯಲ್ಲಿ ನಡೆದ ಗ್ರಾಮೀಣ ಕ್ರೀಡೆಯಲ್ಲಿ ಅವಘಡ!
ರಾಯಚೂರು : ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ
ಜೋಡೆತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿದೆ. ಜೋಡೆತ್ತುಗಳು ಕಲ್ಲು ಎಳೆಯುವ ಸಂದರ್ಭದಲ್ಲಿ ರೈತ ಹುಲಿಗೆಪ್ಪ ಆಯತಪ್ಪಿ ನಡುವೆ ಬಿದ್ದಿದ್ದಾನೆ. ಪರಿಣಾಮ ರೈತನ ಮೇಲೆ ಭಾರದ ಕಲ್ಲು ಬಿದ್ದಿದ್ದು ರೈತ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ರೈತ ಹುಲಿಗೆಪ್ಪನನ್ನು
ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.