ಪ್ರಮುಖ ಸುದ್ದಿ
ಕಳಂಕ ಹೊತ್ತವರನ್ನು ಜನ ಗೆಲ್ಲಿಸಲ್ಲ- ಸಿದ್ರಾಮಯ್ಯ
ಬೆಂಗಳೂರಃ ಅನರ್ಹ ಶಾಸಕರೆಲ್ಲರೂ ಬಿಜೆಪಿ ಸೇರಿರುವದರಿಂದ ಗರಂ ಆಗಿದ್ದ ಸಿದ್ರಾಮಯ್ಯ, ಅನಹರು ಮತ್ತು ಬಿಜೆಪಿಯವರು ನಾಟಕವಾಡಿದ್ದು, ಅನರ್ಹ ರೆಲ್ಲರೂ ಬಿಜೆಪಿ ಸೇರಿರುವದೇ ಸಾಕ್ಷಿ. ಹೀಗಾಗಿ ಇಂತಹ ಕಳಂಕ ಹೊತ್ತ ಅನರ್ಹರನ್ನು ಜನ ಗೆಲ್ಲಿಸುವದಿಲ್ಲ ಎಂದು ತಿಳಿಸಿದರು.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಅನರ್ಹರು ಯಾವುದೇ ಕಾರಣಕ್ಕೂ ಗೆಲ್ಲಲು ಸಾಧ್ಯವಿಲ್ಲ, ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ಯಡಿಯೂರಪ್ಪ ಎರಡು ಬಾರಿ ಸಿಎಂ ಆದರೂ ಹಿಂಬಾಗಿಲಿನಿಂದ ಆಪರೇಷನ್ ಕಮಲದಿಂದ ಸಿಎಂ ಆಗಿದ್ದಾರೆ ಎಂದು ಟೀಕಿಸಿದರು.