ಪ್ರಮುಖ ಸುದ್ದಿ

ಕೈಗಾರಿಕೆ ಕ್ಷೇತ್ರ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿಃ ಜಿಲ್ಲಾಧಿಕಾರಿ ಮಂಜುನಾಥ

ಯಾದಗಿರಿ : ದುಡಿಮೆಯ ದುಡ್ಡಿನ ತಾಯಿ ಎನ್ನವ ವಾಣೆಯಂತೆ ಪ್ರತಿಯೊಬ್ಬರು ಕೈಗಾರಿಕೆ ಕ್ಷೇತ್ರದಲ್ಲಿ ಕೈಗಾರಿಕ ಕೇಂದ್ರಗಳನ್ನು ಸ್ಫಾಪನೆ ಮಾಡುವ ಮುಖಾಂತರ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಯಾದಗಿರಿ ಜಿಲ್ಲಾಧಿಕಾರಿ ಜೆ. ಮಂಜುನಾಥ ತಿಳಿಸಿದರು.

ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಹುಣಸಗಿ ಗ್ರಾಮದ ಶಾದಿಮಹಲ್‍ನಲ್ಲಿ ನಡೆದ ಜಿಲ್ಲಾ ಕೈಗಾರಿಕ ಕೇಂದ್ರ ಹಾಗೂ ಶ್ರೀ ರೇಣುಕಾದೇವಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ನಡೆದ ವಿಚಾರ ಸಂಕೀರ್ಣ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೈಗಾರಿಕ ಕೇಂದ್ರಗಳನ್ನು ಸ್ಥಾಪನೆ ಮಾಡುವ ಮುಖಾಂತರ ನೀರುದ್ಯೋಗ ಸಮಸ್ಯಯನ್ನು ನಿವಾರಿಸಕೊಳ್ಳಬೇಕು.

ಸರಕಾರ ನೀರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರು ಇಲಾಖೆಯ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮುಖಾಂತರ ಉದ್ಯೋಗಿಗಳಾಗಬೇಕು ಎಂದರು.

ಜಿಲ್ಲಾ ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ಸುರೇಖ ಮುನ್ನವಳ್ಳಿ ಮಾತನಾಡಿ, ಇಲಾಖೆಯ ಮುಖಾಂತರ ಹುಣಸಗಿ ವಲಯದಲ್ಲಿ ಅಟೋ ಕ್ಲಸ್ಟರ್ ನಿರ್ಮಾಣ ಮಾಡುವ ಹಂತ ಪ್ರಗತಿಯಲ್ಲಿದ್ದು, ಜಿಲ್ಲಾಧಿಕಾರಿ ಮಂಜುನಾಥ ಜೆ, ಅವರು ಜಮೀನು ನೀಡುವಂತಹ ವ್ಯವಸ್ಥೆಯಾಗಬೇಕೆಂದರು.
ಇಲಾಖೆಲ್ಲಿರುವ ಪ್ರಧಾನ ಮಂತ್ರಿ ಉದ್ಯೋಗ ಶೀಲತಾ ಯೋಜನೆ ಹಾಗೂ ಮುಖ್ಯಮಂತ್ರಿ ಉದ್ಯೋಗ ಶೀಲತಾ ಯೋಜನೆಗಳ ಪರಿಚಯವನ್ನು ಜಿಲ್ಲಾ ಕೈಗಾರಿಕ ಕೇಂದದ ಸಹಾಯಕ ನಿರ್ದೆಶಕರಾದ ರೇಖಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕ ವಾಣಿಜ್ಯ ಮಂಡಳಿಯ ಸದಸ್ಯರಾದ ಚನ್ನಮಲ್ಲಪ್ಪ ಅಕ್ಕಿ , ಹುಣಸಗಿಯ ತಹಸೀಲ್ದಾರ ಸುರೇಶ ಚಾವ್ಲಕರ, ಎಸ್‍ಬಿಐ ಮ್ಯಾನೇಜರ ರೈ , ತೇಜರಾಮ ಚವ್ಹಾಣ ವೇದಿಕೆ ಮೇಲೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button